Advertisement

ಜನ್ನಾಡಿ: ಮತದಾನ ಜಾಗೃತಿ, ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ

01:00 AM Mar 19, 2019 | Harsha Rao |

ಕುಂದಾಪುರ: ಉಡುಪಿ ಜಿಲ್ಲಾಡಳಿತ, ಮತದಾರ ಜಾಗೃತಿ ಅಭಿಯಾನ ಸಮಿತಿ (ಸ್ವೀಪ್‌) ಹಾಗೂ ಕುಂದಾಪುರ ತಾಲೂಕು ಪಂಚಾಯತ್‌ ಆಶ್ರಯದಲ್ಲಿ ಜನ್ನಾಡಿಯ ಕೊರಗರ ಕಾಲನಿಯಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ವಿವಿಪ್ಯಾಟ್‌ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ಸೋಮವಾರ ನಡೆಯಿತು. 

Advertisement

ಮಾಹಿತಿ
ಸ್ವೀಪ್‌ ಸಮಿತಿ ಅಧ್ಯಕ್ಷೆ, ಜಿ.ಪಂ. ಸಿಇಒ ಸಿಂಧೂ ರೂಪೇಶ್‌ ವಿವಿ ಪ್ಯಾಟ್‌ ಕುರಿತು ಮಾಹಿತಿ ನೀಡಿ, ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕೂಡ ಸಕ್ರಿಯರಾಗಿ ಪಾಲ್ಗೊಳ್ಳ ಬೇಕು ಎಂದು ಮನವಿ ಮಾಡಿಕೊಂಡರು. 
ಈ ವೇಳೆ ಸೇರಿದ್ದ ಎಲ್ಲರಿಗೂ ಕಡ್ಡಾಯ ವಾಗಿ, ನ್ಯಾಯಸಮ್ಮತವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ  ಸಂದರ್ಭ ಕುಂದಾಪುರ ತಾ.ಪಂ. ಇಒ ಕಿರಣ್‌ ಪೆಡೆ°àಕರ್‌, ಐಟಿಡಿಪಿ ಇಲಾಖೆಯ ಯೋಜನೆ ಸಮನ್ವಯ ಅಧಿಕಾರಿ ವಿಶ್ವನಾಥ್‌ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next