Advertisement

ಜೆಡಿಎಸ್‌ನಿಂದ ಜನತಾ ಜಲಧಾರೆ ಕಾರ್ಯಕ್ರಮ

10:02 AM Apr 22, 2022 | Team Udayavani |

ಸಿದ್ದಾಪುರ: ಈ ನಾಡಿನ ಜಲಸಂಪನ್ಮೂಲದ ಕುರಿತಾಗಿ ಸಮರ್ಪಕ ಮಾಹಿತಿ, ಅರಿವು ಹೊಂದಿದ ಅಗ್ರಗಣ್ಯರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪ್ರಮುಖರು. ಅವರಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಜಲಸಂಪನ್ಮೂಲದ ಬಳಕೆ, ನಿರ್ವಹಣೆ ಬಗ್ಗೆ ಅಪಾರ ಜ್ಞಾನ ಹೊಂದಿದವರು. ಅವರ ನೇತೃತ್ವದಲ್ಲಿ ಜಾತ್ಯತೀತ ಜನತಾದಳವು ನಮ್ಮ ರಾಜ್ಯದ ಜಲಸಂಪನ್ಮೂಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅದರ ಸಮರ್ಪಕ ನಿರ್ವಹಣೆ ಮೂಲಕ ಸಮೃದ್ಧ ಹಾಗೂ ಸ್ವಾಭಿಮಾನಿ ಕರ್ನಾಟಕ ಕಟ್ಟಲು ಜನತಾ ಜಲಧಾರೆ ಮೂಲಕ ಮುಂದಾಗಿದ್ದಾರೆ ಎಂದು ಜೆಡಿಎಸ್‌ ಧುರೀಣ ಡಾ| ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.

Advertisement

ಅವರು ಗೋಳಿಮಕ್ಕಿ ಸಮೀಪದ ಅತ್ತಿಸವಲಿನಲ್ಲಿ ಜಾತ್ಯತೀತ ಜನತಾದಳ ಆಯೋಜಿಸಿದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪಾರ ಜಲಸಂಪತ್ತಿದ್ದರೂ ನೀರಾವರಿ ಸೌಲಭ್ಯಗಳಿಂದ ವಂಚಿತವಾದ ರಾಜ್ಯ ನಮ್ಮದು. ನಮ್ಮಲ್ಲಿ ಕೃಷ್ಣಾ, ಕಾವೇರಿ ಮುಂತಾದ ದೊಡ್ಡ ನದಿಗಳು, ಜಿಲ್ಲೆಯಲ್ಲಿ ಕಾಳಿ, ಶರಾವತಿ, ಅಘನಾಶಿನಿಯಂಥ 5 ನದಿಗಳು ಹರಿದಿದ್ದರೂ ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಕಣ್ಣೆದುರು ಹರಿಯುವ ನದಿಗಳಲ್ಲಿ ನೀರಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತದೆ. ಕೃಷಿಗೆ ನೀರಿನ ಬಳಕೆ ಸೌಲಭ್ಯ ಇರದ ಕಾರಣ ಕೃಷಿ ಕುಂಠಿತವಾಗುತ್ತಿದೆ ಎಂದರು.

ಈ ಯಾತ್ರೆಯ ಉದ್ದೇಶ ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಈ ಜಲಸಂಪನ್ಮೂಲಗಳ ಬಳಕೆಯನ್ನು ಯಾವ ರೀತಿ ಮಾಡಬಹುದು ಎನ್ನುವದನ್ನು ಜನತೆಗೆ ತಲುಪಿಸುವುದಾಗಿದೆ ಎಂದರು. ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ ರಾಜ್ಯದ 16 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆಗೊಂಡ ಜನತಾ ಜಲಧಾರೆ ಸಂಕಲ್ಪ ಯಾತ್ರೆ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು ಜನರಲ್ಲಿ ಜಾಗೃತಿ ಉಂಟು ಮಾಡಲಾಗುತ್ತಿದೆ ಎಂದರು.

ತಾಲೂಕಾಧ್ಯಕ್ಷ ಕೆ.ಎಂ. ಹೆಗಡೆ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ ಬೈಲಳ್ಳಿ, ಪದಾಧಿಕಾರಿಗಳಾದ ಶ್ರೀಧರ ಕೊಂಡ್ಲಿ, ಮೌಲಾ ಸಾಬ್‌, ಜಿಲ್ಲಾ ಪ್ರಮುಖರಾದ ವಿ.ಎಂ. ಭಂಡಾರಿ, ರಮೇಶ ನಾಯ್ಕ, ಮುತ್ತಣ್ಣ ಸಂಗೂರಮಠ, ತುಕಾರಾಂ ಮುಂತಾದವರಿದ್ದರು.

Advertisement

ಸಂಗಮದಿಂದ ಜಲ ಸಂಗ್ರಹ: ಜಾತ್ಯತೀತ ಜನತಾದಳ ಆಯೋಜಿಸಿದ ಜನತಾ ಜಲಧಾರೆ ಸಂಕಲ್ಪ ಯಾತ್ರೆಯನ್ನು ಕಾನಸೂರು ಸಮೀಪದ ಬಾಳೂರಿನಲ್ಲಿ ಸ್ವಾಗತಿಸಲಾಯಿತು. ಅಲ್ಲಿನ ಅಘನಾಶಿನಿ ಮತ್ತು ಶಾಲ್ಮಲಾ ನದಿಗಳ ಸಂಗಮದಲ್ಲಿ ನದಿಯ ಮಧ್ಯೆ ನಿರ್ಮಿಸಲಾದ ಈಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿ, ಸಂಗಮದ ನೀರನ್ನು ಸಂಗ್ರಹಿಸಲಾಯಿತು.

ಜಲಕುಂಭದಲ್ಲಿ ಡಾ|ಶಶಿಭೂಷಣ ಹೆಗಡೆ, ಗಣಪಯ್ಯ ಗೌಡ ಮುಂತಾದವರು ಸಂಗಮದ ನೀರನ್ನು ಸಂಗ್ರಹಿಸಿದರು. ತಾಲೂಕಾಧ್ಯಕ್ಷ ಕೆ.ಎಂ. ಹೆಗಡೆ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ ಹೆಗಡೆ ಬೈಲಳ್ಳಿ, ಪದಾಧಿಕಾರಿಗಳಾದ ಶ್ರೀಧರ ಕೊಂಡ್ಲಿ, ಮೌಲಾಸಾಬ್‌, ಅನಂತ ಗೌಡ, ಜಿಲ್ಲಾ ಪ್ರಮುಖರಾದ ವಿ.ಎಂ. ಭಂಡಾರಿ, ರಮೇಶ ನಾಯ್ಕ, ಮುತ್ತಣ್ಣ ಸಂಗೂರಮಠ, ತುಕಾರಾಂ, ಮಿರ್ಜಾನಕರ್‌ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next