Advertisement

ಕಾಶ್ಮೀರಿ ನಾಯಕರ ಬಿಡುಗಡೆ

09:48 AM Jan 17, 2020 | Hari Prasad |

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದು ಬಳಿಕ ಗೃಹಬಂಧನದಲ್ಲಿ ಇರಿಸಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರ ಪೈಕಿ ಐವರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

Advertisement

ಮುಂಜಾಗ್ರತಾ ಕ್ರಮವಾಗಿ ಕಳೆದ 5 ತಿಂಗಳಿಂದಲೂ ಬಂಧನದಲ್ಲೇ ಇದ್ದ ನ್ಯಾಷನಲ್‌ ಕಾನ್ಫರೆನ್ಸ್‌ನ ಮಾಜಿ ಶಾಸಕ ಅಲ್ತಾಫ್ ಕಾಲೂ, ಮಾಜಿ ಎಂಎಲ್‌ಸಿ ಶೌಕತ್‌ ಗಣಿ, ಪಿಡಿಪಿ ಮಾಜಿ ಎಂಎಲ್‌ಸಿ ನಿಜಾಮುದ್ದೀನ್‌ ಭಟ್‌, ಶ್ರೀನಗರ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಸಲ್ಮಾನ್‌ ಸಾಗರ್‌ ಹಾಗೂ ಪಿಡಿಪಿ ನಾಯಕ ಮುಖಾ¤ರ್‌ರನ್ನು ಬಿಡುಗಡೆ ಮಾಡಲಾಗಿದೆ.

ಇದೇ ವೇಳೆ, 370ನೇ ವಿಧಿ ರದ್ದತಿಯ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು 36 ಕೇಂದ್ರ ಸಚಿವರನ್ನು ಕಣಿವೆ ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿರುವ ಕೇಂದ್ರ ಸರಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದ್ದು, ಅಲ್ಲಿ ಎಲ್ಲವೂ ಸಹಜವಾಗಿದೆ ಎಂದಾದ ಮೇಲೆ ಸಚಿವರನ್ನು ಕಳುಹಿಸುತ್ತಿರುವುದೇಕೆ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next