Advertisement

ಕೋವಿಡ್ ತಡೆಗೆ ಸರ್ಕಾರಗಳ ಅವಿರತ ಶ್ರಮ

05:15 PM Apr 15, 2020 | Team Udayavani |

ಜಮಖಂಡಿ: ದೇಶ ಸಂದಿಗ್ಧ ಸ್ಥಿತಿಯಲ್ಲಿದ್ದು, ಮಹಾಮಾರಿ ಕೋವಿಡ್‌-19 ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ದೇಶದ ಜನತೆ ತಮ್ಮ ಮನೆಗಳಲ್ಲಿದ್ದು, ರೋಗಾಣು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

Advertisement

ನಗರದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ ಜಯಂತ್ಸುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ| ಬಿ.ಆರ್‌.ಅಂಬೇಡ್ಕರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸಿಕೊಂಡು ಸಮೃದ್ಧ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು. ಉದ್ಯಮಿ ಜಗದೀಶ ಗುಡಗುಂಟಿ, ವಕೀಲ ಚಂದ್ರಕಾಂತ ಉಪಾಧ್ಯೆ, ಶಶಿ ವಿಶ್ವಬ್ರಾಹ್ಮಣ, ವೀರಣ್ಣ ಕಲೂತಿ, ಕುಶಾಲ ವಾಘಮೋರೆ, ಅಜಯ ಕಡಪಟ್ಟಿ, ಪ್ರಶಾಂತ ಚರಕಿ, ಯಮನೂರ ಮೂಲಂಗಿ, ರಮೇಶ ಆಲಬಾಳ, ಶ್ರೀಶೈಲ ಪರೀಟ, ಮಲ್ಲು ಹೆಸಮನಿ, ಶಂಕರ ಕಾಳೆ, ಅಮರ ಸೋಳುಂಕೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next