Advertisement

ನಿತಿನ್‌ ಸಾಹಸದಿಂದ ಟೈ ಸಾಧಿಸಿದ ಜೈಪುರ

08:55 AM Sep 15, 2017 | Team Udayavani |

ಸೋನೆಪತ್‌ (ಹರಿಯಾಣ): ತವರಿನ ಚರಣದ ಕೊನೆ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಹೊರತಾಗಿಯೂ ಆತಿಥೇಯ ಹರಿಯಾಣ ಸ್ಟೀಲರ್ 27-27 ಅಂತರ ದಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ ವಿರುದ್ಧ ಟೈ ಮಾಡಿಕೊಂಡಿದೆ. ಟೈ ಸಾಧಿಸಿದರೂ ಹರಿಯಾಣ ‘ಎ’ ವಲಯದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು. 

Advertisement

ಶುಕ್ರವಾರದಿಂದ ರಾಂಚಿಯಲ್ಲಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ತೆಲುಗು ಟೈಟಾನ್ಸ್‌ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ತಂಡವು ಗುಜರಾತ್‌ ತಂಡವನ್ನು ಎದುರಿಸಲಿದೆ. 

ಗುರುವಾರ ಇಲ್ಲಿನ ಮೋತಿಲಾಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ರೋಚಕವಾಗಿ ಸಾಗಿತು. ಬಹುತೇಕ ಜೈಪುರ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 2ನೇ ಅವಧಿಯ ಕೊನೆಯ 4 ನಿಮಿಷದ ಆಟದಲ್ಲಿ ರೈಡರ್‌ ನಿತಿನ್‌ ರಾವಲ್‌ 3 ಅಂಕ ತಂದು ಪವಾಡ ಮಾಡಿದರು. ಇದರಿಂದ 19-23 ಹಿನ್ನಡೆಯಲ್ಲಿದ್ದ ಜೈಪುರ ಚೇತರಿಸಿಕೊಂಡಿತು. ಕೊನೆಗೆ ಇದೇ ಅಂಕವನ್ನು ಜೈಪುರ ಕಾಯ್ದುಕೊಂಡು ಹೋಯಿತಲ್ಲದೆ ಸ್ಟೀಲರ್ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು. ಈ ಮೂಲಕ ತವರಿನಲ್ಲಿ ಸ್ಟೀಲರ್ 2ನೇ ಟೈ ಅನುಭವಿಸಿತು.

ಮಂಜಿತ್‌, ಜಸ್ವೀರ್‌ ವೈಫ‌ಲ್ಯ: ನಿತಿನ್‌ ರಾವಲ್‌ (11 ರೈಡಿಂಗ್‌ ಅಂಕ) 2ನೇ ಅವಧಿಯಲ್ಲಿ ಜೈಪುರಕ್ಕೆ ಟೈ ಮಾಡಿಕೊಳ್ಳಲು ನೆರವಾದರು. ಉಳಿದಂತೆ ಮಂಜಿತ್‌ ಚಿಲ್ಲರ್‌ (2 ಅಂಕ), ಪವನ್‌ ಕುಮಾರ್‌ (4 ಅಂಕ), ಜಸ್ವೀರ್‌ ಸಿಂಗ್‌ (2 ಅಂಕ) ವೈಫ‌ಲ್ಯ ಅನುಭವಿಸಿದ್ದರಿಂದ ಜೈಪುರ ಗೆಲುವು ಸಾಧ್ಯವಾಗಲಿಲ್ಲ.

ಹರಿಯಾಣಕ್ಕೆ ನಾಡಾ, ವಜೀರ್‌ ಅನುಪಸ್ಥಿತಿ: ಹರಿಯಾಣ ಸ್ಟೀಲರ್ ತಾರಾ ಆಟಗಾರ ಸುರೇಂದ್ರ ನಾಡಾ ಪೂರ್ಣ ಪಂದ್ಯವನ್ನು ಆಡಲಿಲ್ಲ. ಇನ್ನು ವಜೀರ್‌ ಸಿಂಗ್‌ ಮೊದಲ ಅವಧಿಯಲ್ಲಿ ಗಾಯಗೊಂಡರು. ಮತ್ತೆ ಆಡಿದರಾದರೂ ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ದೀಪಕ್‌ ಕುಮಾರ್‌ ದಹಿಯಾ (7 ರೈಡಿಂಗ್‌ ಅಂಕ), ಸುರ್ಜಿತ್‌ ಸಿಂಗ್‌ (6  ರೈಡಿಂಗ್‌ ಅಂಕ)  ಹಾಗೂ ವಿಕಾಸ್‌ (4 ಟ್ಯಾಕಲ್‌ ಅಂಕ) ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದರು.

Advertisement

ಮೊದಲ ಅವಧಿಯಲ್ಲಿ  ಸ್ಟೀಲರ್ ಮೇಲುಗೈ: ತವರಿನ ಚರಣದ ಕೊನೆ ಪಂದ್ಯದಲ್ಲಿ ಗೆಲುವಿನೊಂದಿಗೆ ಮುಗಿಸುವ ಕನಸು ಸ್ಟೀಲರ್ ಅವರದ್ದಾಗಿತ್ತು. ಮೊದಲ ಅವಧಿಯ ಆಟದಲ್ಲಿ ಜೈಪುರ ತಂಡ ಆರಂಭದಲ್ಲಿ ಪ್ರಬಲ ಆಟಕ್ಕೆ ಇಳಿಯಿತು. ಆದರೆ ಹರ್ಯಾಣ ಇದಕ್ಕೆ ಕೆಲವೇ ನಿಮಿಷಗಳಲ್ಲಿ ಸೂಕ್ತ ಉತ್ತರ ನೀಡಲು ಆರಂಭಿಸಿತು. ಆಟ ಮುಗಿಯಲು 13 ನಿಮಿಷ ಇದ್ದಾಗ ಹರ್ಯಾಣ ತಾರಾ ರೈಡರ್‌ ವಜೀರ್‌ ಸಿಂಗ್‌ ಗಾಯಕ್ಕೆ ತುತ್ತಾದರು. ಇದು ಸ್ಥಳೀಯ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿತು. ಆದರೆ ವಜೀರ್‌ ಮತ್ತೆ ಆಡುವ ಮೂಲಕ ಅಭಿಮಾನಿಗಳ ಆತಂಕ ದೂರ ಮಾಡಿದರು.

ಇಲ್ಲಿಂದ ಬಳಿಕ ಆಟವನ್ನು ತೆಗೆದುಕೊಂಡು ಹೋಗಿದ್ದು ದೀಪಕ್‌ ಕುಮಾರ್‌ ದಹಿಯಾ. ಅವರು ಹರ್ಯಾಣ ಪರ ಮಿಂಚಿನ ದಾಳಿ ನಡೆಸಿದರು. ಅಂಕವನ್ನು ಏರಿಸುತ್ತಾ ಹೋದರು. ಪರಿಣಾಮ ಜೈಪುರ ಮೊದಲ ಅವಧಿಯ ಅಂತ್ಯ
ಗೊಳ್ಳಲು 5 ನಿಮಿಷ ಇದ್ದಾಗ ಮೊದಲ ಸಲ ಆಲೌಟ್‌ಗೆ ಒಳಗಾಯಿತು.

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next