Advertisement

ಜೈಷ್‌, ಲಷ್ಕರ್‌, ಹಿಜ್ಬುಲ್‌ ಜಂಟಿ ದಾಳಿ?

06:00 AM Jun 12, 2018 | Team Udayavani |

ನವದೆಹಲಿ: ಗಡಿ ಕಾಯುವ ಯೋಧರು, ಗುಪ್ತಚರ ಇಲಾಖೆ ಸ್ವಲ್ಪ ಮೈಮರೆತರೂ ದೇಶದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇಡೀ ವಿಶ್ವವೇ ಉಗ್ರವಾದ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿದ್ದರೂ, ಐಎಸ್‌ಐ ಮತ್ತು ಪಾಕ್‌ ಸೇನೆಯ ಆಶ್ರಯದಲ್ಲೇ ಉಗ್ರ ಸಂಘಟನೆಗಳು ಭಾರತದಲ್ಲಿ ದಾಳಿಗೆ ಮುಂದಾಗುತ್ತಿವೆ!

Advertisement

ಪಾಕ್‌ ಈವರೆಗೆ ನಡೆಸಿದ ಬಹುತೇಕ ಪ್ರಯತ್ನಗಳು ವಿಫ‌ಲವಾಗಿದ್ದು, ಇತ್ತೀಚೆಗೆ ಗಡಿ ನುಸುಳಿ ಬರುವುದೇ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕಾಗಿಯೇ ಜೈಶ್‌- ಎ-ಮೊಹ ಮ್ಮದ್‌, ಲಷ್ಕರ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳು ಜಂಟಿಯಾಗಿ ಭಾರತೀಯ ಸೇನಾನೆಲೆಗಳ ಮೇಲೆ ದಾಳಿ ನಡೆಸಲು ಸಂಚು ನಡೆಸಿವೆ. ಅಲ್ಲದೆ, ಮನ್ವೇರಾದಲ್ಲಿ ಜೈಶ್‌, ಲಷ್ಕರ್‌, ಹಿಜ್ಬುಲ್‌ ಉಗ್ರರು ಅಲ್ಲಿನ ಸೇನೆಯ ನೆರವಿನಿಂದಲೇ ಉಗ್ರ ತರಬೇತಿ ಶಿಬಿರ ನಡೆಸುತ್ತಿವೆ ಎಂಬ ಅಂಶ ಬಹಿರಂಗಗೊಂಡಿದೆ.

ಪಾಕಿಸ್ತಾನದ ಉಗ್ರವಾದಿ ಸಂಘಟನೆಗಳಿಗೆ ಭಾರತವೇ ಟಾರ್ಗೆಟ್‌ ಅನ್ನೋದು ಸಾಬೀತಾಗುತ್ತಿದೆ. ಇದೀಗ ನಗ್ರೋಟಾ ಸೇನಾನೆಲೆ ಮೇಲಿನ ದಾಳಿ ಆರೋಪದಲ್ಲಿ ಬಂಧಿತನಾಗಿರುವ ಶ್ರೀನಗರ ಮೂಲದ ಆಷಿಕ್‌ ಬಾಬಾ ವಿಚಾರಣೆ ವೇಳೆ ಉಗ್ರ ಸಂಘಟನೆಗಳ ಈ ಪ್ಲ್ಯಾನ್‌ ಬಗ್ಗೆ ಬಾಯಿಬಿಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next