Advertisement

“8 ಎಂಎಂ’ಯಶಸ್ಸಿಗೆ ಜಪಹೋಮ ಮಾಡಿಸಿದ ಜಗ್ಗೇಶ್

03:22 PM Nov 16, 2018 | Team Udayavani |

ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ “8 ಎಂಎಂ’ ಚಿತ್ರ ಇಂದು ರಾಜ್ಯಾದ್ಯಂದ ತೆರೆಕಂಡಿದ್ದು, ಚಿತ್ರದ ಗೆಲುವಿಗಾಗಿ ಜಗ್ಗೇಶ್​ ದೇವರ ಮೊರೆ ಹೋಗಿದ್ದಾರೆ. ಹೌದು! ಶ್ರೀ ಗುರು ರಾಘವೇಂದ್ರಸ್ವಾಮಿಯ ಪರಮ ಭಕ್ತರಾದ ನಟ ಜಗ್ಗೇಶ್​ ಕೆ.ಜಿ. ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಇಂದು ಮುಂಜಾನೆ 5 ಘಂಟೆಗೆ ಶ್ರೀ ಲಕ್ಷೀ ನಾರಾಯಣ ಪ್ರೀತ್ಯರ್ಥ ಜಪಹೋಮ ಮಾಡಿಸಿದ್ದಾರೆ.

Advertisement

“8 ಎಂಎಂ’ ಚಿತ್ರದ ಯಶಸ್ಸಿಗಾಗಿ ಚಿತ್ರಮಂದಿರದಲ್ಲೇ ಪೂಜೆ ಮಾಡಿಸಿದ್ದು, ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ ಸರ್ವೆಜನಃ ಸುಖಿನೋಭವಂತು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

ಇನ್ನು “ನೀರ್‌ ದೋಸೆ’ ನಂತರ ನವರಸ ನಾಯಕ ಜಗ್ಗೇಶ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದಾರೆ. ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next