Advertisement

ಹುಲಿ ಉಗುರು ವಿಚಾರವಾಗಿ ʼಕಿತ್ತೋದ್‌ ನನ್ಮಗʼ ಎಂದ ಜಗ್ಗೇಶ್ ಮಾತಿಗೆ ವರ್ತೂರು ಹೇಳಿದ್ದೇನು?

04:25 PM Feb 18, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -10 ಕಾರ್ಯಕ್ರಮದಲ್ಲಿ ಸದ್ದು ಮಾಡಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಕಾರಣಕ್ಕೂ ದೊಡ್ಮನೆಯ ಆಚೆಯೂ ಸುದ್ದಿಯಾಗಿದ್ದರು. ಇದೀಗ ಹುಲಿ ಉಗುರು ಬಗ್ಗೆ ಖ್ಯಾತ ನಟರೊಬ್ಬರು ಮಾತನಾಡಿದ್ದು ವರ್ತೂರು ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ.

Advertisement

ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಅಪಾರ ಮಂದಿಯನ್ನು ರಂಜಿಸಿದ್ದರು.  ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಕಾರಣಕ್ಕೆ ವರ್ತೂರು ಅವರನ್ನು ದೊಡ್ಮನೆಯಿಂದಲೇ ಅರಣ್ಯಾಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಇದಾದ ಬಳಿಕ ಹುಲಿ ಉಗುರು ಪೆಂಡೆಂಟ್‌ ವಿಚಾರವಾಗಿ ನಟ ಜಗ್ಗೇಶ್ಮ ನಿಖಿಲ್‌ ಕುಮಾರಸ್ವಾಮಿ, ದರ್ಶನ್‌ ಅವರ ಹೆಸರು ಕೇಳಿ ಬಂದಿತ್ತು.

ಪೊಲೀಸರ ವಿಚಾರಣೆ ಬಳಿಕ ಬಿಗ್‌ ಬಾಸ್‌ ಮನೆಗೆ ಬಂದಾಗ ವರ್ತೂರು ಅವರಿಗೆ ಅಪಾರ ಬೆಂಬಲ ಸಿಕ್ಕಿತ್ತು. ಆದರೆ ಇದೀಗ ಹುಲಿ ಉಗುರು ವಿಚಾರವಾಗಿ ನಟ ಜಗ್ಗೇಶ್‌ ಅವರು ಪರೋಕ್ಷವಾಗಿ ವರ್ತೂರು ಸಂತೋಷ್‌ ಅವರಿಗೆ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಅಭಿಮಾನಿಗಳನ್ನು ಗರಂ ಆಗಿಸಿದೆ.

ಆಗಿದ್ದೇನು? : ಗುರುಪ್ರಸಾದ್‌ ಹಾಗೂ ನವರಸ ನಾಯಕ ಜಗ್ಗೇಶ್‌ ಅವರ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ʼರಂಗನಾಯಕʼ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಗ್ಗೇಶ್‌, “ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು” ಎಂದು ಜಗ್ಗೇಶ್ ಹೇಳಿದ್ದರು.

ಇಲ್ಲಿ ಜಗ್ಗೇಶ್‌ ಅವರು ಬಳಸಿರುವ ʼಕಿತ್ತೋದ್‌ ನನ್ಮಗʼ ಪದ ಬಳಕೆ ಸರಿಯಲ್ಲ ಎಂದು ವರ್ತೂರು ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗುತ್ತಿದ್ದಂತೆ ವರ್ತೂರು ಸಂತೋಷ್‌ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

Advertisement

“ಸದ್ಯ ಮಾಧ್ಯಮಗಳ ಜೊತೆ ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿದ್ದಾರೆ. “ಬಿಡಿ ಅವ್ರು ದೊಡ್ಡೋರು. ನಾನು ಏನು ಹೇಳ್ತೀನಿ ಅಂದ್ರೆ, ಕಾಲೈ ತಸ್ಮೈ ನಮಃ ಅಷ್ಟೆ. ನಾನು ಏನು ಹೇಳ್ತೀನಿ ಅಂದ್ರೆ, ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಸೈಲೆಂಟ್ ಆಗಿ ಇದ್ದರೆ ಸಾಕು ಉತ್ತರ ಸಿಗುತ್ತದೆ.” ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next