Advertisement

ರೈಗಳೇ ನಿಮ್ಮ ಹೆಸರು ‘ರಸತ್ತುಲ್ಲಾ’ಅಂತ ಬದಲಾಯಿಸಿಕೊಳ್ಳಿ

12:24 PM Dec 29, 2017 | |

ಬೆಂಗಳೂರು: ‘ಅಲ್ಲಾಹು ಕೃಪೆ ಮತ್ತು ಬಂಟ್ವಾಳದ  ಮುಸ್ಲಿಮರ ಜಾತ್ಯಾತೀತ ನಿಲುವಿನಿಂದ ನಾನು 6 ಬಾರಿ ಶಾಸಕನಾಗಿ  ಆಯ್ಕೆಯಾಗಲು ಸಾಧ್ಯವಾಯಿತು’ ಎಂದು ಹೇಳಿಕೆ ನೀಡಿದ ಸಚಿವ ರಮನಾಥ ರೈ ಅವರಿಗೆ ಬಿಜೆಪಿ ನಾಯಕ,ನವರಸ ನಾಯಕ ಜಗ್ಗೇಶ್‌ ಹೆಸರು ಬದಲಾಯಿಸಿಕೊಳ್ಳಲು ಸಲಹೆ ನೀಡಿ ಟಾಂಗ್‌ ನೀಡಿದ್ದಾರೆ. 

Advertisement

ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು..ಮುಸಲ್ಮಾನರಿಗಾದರೂ  ವಿಧೇಯರಾಗಿ..!5 ಬಾರಿ ನಮಾಜ್‌ ಶುರುಮಾಡಿ..!ಯಾವುದೇ  ಕಾರಣಕ್ಕೂ ಹಿಂದುಗಳ ಮತ ಕೇಳಬೇಡಿ..ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚನ್ನಾಗಿ ಬಾಳಿ!‘ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ . 

ಗುರುವಾರ ಮಂಗಳೂರಿನಲ್ಲಿ ನಡೆದ ಬ್ಯಾರಿ ಭಾಷಿಕರ ಸಮಾವೇಶದಲ್ಲಿ ರಮಾನಾಥ ರೈ ಅವರು ನೀಡಿರುವ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ನಿಮಗೆ ಹಿಂದೂಗಳು ಮತ ಹಾಕಲಿಲ್ಲವೆ ಎಂದು ಹಲವರು ಪ್ರಶ್ನಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next