Advertisement

ಆಂಧ್ರ ರಕ್ತ ರಾಜಕೀಯ;ಜಗನ್‌ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ನಿಗೂಢ ಸಾವು

03:40 PM Mar 15, 2019 | Team Udayavani |

ಹೈದರಾಬಾದ್‌ : ಲೋಕಸಭಾ ಚುನಾವಣೆಯ ಕಾವು ಏರಿರುವ ವೇಳೆ ಆಂಧ್ರದ ಮಾಜಿ ಪ್ರಧಾನಿ ವೈ.ಎಸ್‌.ರಾಜಶೇಖರ್‌ ರೆಡ್ಡಿ ಅವರ ಸಹೋದರ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ವೈ.ಎಸ್‌.ವಿವೇಕಾನಂದ ರೆಡ್ಡಿ ಅವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

Advertisement

ಕಡಪ ಜಿಲ್ಲೆಯ ಪೆಲಿವೆಂಡುಲಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ತಲೆಯಲ್ಲಿ ಹಲವು ಗಾಯಗಳು ಕಂಡು ಬಂದಿವೆ. ಫೊಲೀಸರು ಕೊಲೆ ಪ್ರಕರಣವನ್ನ  ದಾಖಲಿಸಿಕೊಂಡಿದ್ದಾರೆ.

ಬೆಡ್‌ರೂಮ್‌ ಮತ್ತು ಬಾತ್‌ರೂಮ್‌ನಲ್ಲಿ  ರಕ್ತದ ಕಲೆಗಳು ಕಂಡು ಬಂದಿರುವುದರಿಂದ ಕೊಲೆ ಎನ್ನುವ ಶಂಕೆ ಬಲವಾಗಿದೆ.

ಮಾಜಿ ಕೃಷಿ ಸಚಿವರಾಗಿದ್ದ  68 ರ ಹರೆಯದ ವಿವೇಕಾನಂದ ರೆಡ್ಡಿ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪರ ಪ್ರಚಾರದಲ್ಲಿ ನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next