Advertisement
ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋ. ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ “ಹಲಸು ಮೇಳ – 2018’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲಸು ಆಹಾರ ಮಾತ್ರವಲ್ಲದೆ ಅದರಲ್ಲಿ ಔಷಧೀಯ ಗುಣಗಳೂ ಇವೆ. ಖಾಲಿ ಪ್ರದೇಶಗಳಲ್ಲಿ ಹಲಸನ್ನು ಬೆಳೆಸಬಹುದು. ಹಲಸಿನ ಉತ್ಪನ್ನ ಒದಗಿಸಿ ಮಾಹಿತಿ ನೀಡುವ ಮತ್ತು ರೈತರನ್ನು ಪ್ರೋತ್ಸಾಹಿಸುವ ಹಲಸು ಮೇಳ ಶ್ಲಾಘನೀಯ ಕಾರ್ಯಕ್ರಮ ಎಂದು ರಘುಪತಿ ಭಟ್ ಹೇಳಿದರು.
Related Articles
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಹವಾಮಾನ ಬದಲಾವಣೆಯ ದುಷ್ಪರಿಣಾಮದಿಂದ ಇತರ ಹಣ್ಣುಗಳು ನಾಶವಾದರೂ ಹಲಸು ಮಾತ್ರ ಹಾಗೆಯೇ ಉಳಿಯುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಹಲಸು ಮಾತ್ರ ಭವಿಷ್ಯದ ಹಣ್ಣಾಗಿ (ಫ್ಯೂಚರ್ ಫ್ರುಟ್) ಉಳಿಯಬಹುದು. ಅದನ್ನು ಬೆಳೆಸಲು ಮುಂದಾಗಬೇಕೆಂದರು.
Advertisement
ಸುಮಾರು 70 ಕೆ.ಜಿ. ತೂಕದ ಹಲಸು ವೇದಿಕೆಯಲ್ಲಿ ಗಮನ ಸೆಳೆಯಿತು.ವಿವಿಧ ಜಾತಿಯ ಹಲಸಿನ ಹಣ್ಣು, ಸಸಿಗಳು ಸಾರ್ವಜನಿಕರಿಗೆ ಲಭ್ಯವಾದವು.
ಸಾಂಪ್ರದಾಯಿಕ ತಿನಿಸುಗಳ ಜತೆಗೆ ಹಲಸಿನ ಹಣ್ಣಿನ ಐಸ್ಕ್ರೀಂ ಕೂಡ ಆಕರ್ಷಿಸಿತು.
ಹಲಸನ್ನು ತುಂಡು ಮಾಡುವ ಮೂಲಕ ಹಲಸಿನ ಮೇಳಕ್ಕೆ ಚಾಲನೆ.
ದೊಡ್ಡಬಳ್ಳಾಪುರ ತೂಬೆಗೆರೆ ಹಲಸು ಬೆಳೆಗಾರರು ಕೂಡ ಭಾಗಿ.