Advertisement

ಕ್ರೈಸ್ತ ಸಮುದಾಯದ ನಿಂದನಾತ್ಮಕ ಹೇಳಿಕೆಗೆ ಪ್ರತಾಪ್ ಸಿಂಹ ಕ್ಷಮೆಯಾಚಿಸಬೇಕು : ಜೆ.ಆರ್ ಲೋಬೋ

05:07 PM Mar 03, 2021 | Team Udayavani |

ಮಂಗಳೂರು : ಕೆಡಿಪಿ ಸಭೆಯೊಂದರಲ್ಲಿ ಕ್ರೈಸ್ತ ಸಮುದಾಯದ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಂಗಳೂರು ದಕ್ಷಿಣ ವಿಭಾಗದ ಮಾಜಿ ಶಾಸಕ ಜೆ.ಆರ್ ಲೋಬೋ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಕೆಡಿಪಿ ಸಭೆಯೊಂದರಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೊರಳಿನಲ್ಲಿ ಶಿಲುಬೆ ಧರಿಸಿದವರಿಗೆ ಸೌಲಭ್ಯ ನೀಡಬೇಡಿ ಎನ್ನುವ ಮಾತನ್ನು ಆಡಿದ್ದಾರೆ. ಕೊರಳಿನಲ್ಲಿ ಶಿಲುಬೆ ಧರಿಸುವುದರಿಂದ ಏನು ಅಪರಾಧ ? ಶಿಲುಬೆ ಧರಿಸುವುದು ಆ ಸಮುದಾಯದ ಸಂಕೇತ. ಇಂತಹ ಕೀಳು ಮಟ್ಟದ ಮನೋಭಾವ ಯಾವ ಸಂಸದರಿಗೂ ಇರಬಾರದು ಎಂದರು.

ಇದನ್ನೂ ಓದಿ ; ತಾವೇ ಕ್ಲಿಕ್ಕಿಸಿದ ಕಾಡು ಪ್ರಾಣಿಗಳ ಫೋಟೋ ಶೇರ್ ಮಾಡಿದ ದರ್ಶನ್..!

ಪ್ರತಾಪ್ ಸಿಂಹ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಅವರು ಸಂಸತ್ತಿನ ಸದಸ್ಯರಾಗಲು ಅನರ್ಹ ಎಂದು ಜೆ.ಆರ್ ಲೋಬೋ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next