Advertisement

ಜ. 28: ವಿಶ್ವಕರ್ಮ ಮಹಾಯಜ್ಞ,ಯುವಸಮಾವೇಶ

11:54 PM Jan 12, 2024 | Team Udayavani |

ಮಂಗಳೂರು: ವಿಶ್ವಬ್ರಾಹ್ಮಣ ಸಮಾಜದ ಅಭಿವೃದ್ಧಿ ಹಾಗೂ ಲೋಕಕಲ್ಯಾಣಾರ್ಥ ವಿಶ್ವಕರ್ಮ ಯುವ ಮಿಲನ ಕರ್ನಾಟಕ ರಾಜ್ಯ ಆಶ್ರಯದಲ್ಲಿ “ವಿಶ್ವಕರ್ಮ ಮಹಾ ಯಜ್ಞ’ ಹಾಗೂ ಸಮಾಜದ ಸಂಘಟನೆಗಾಗಿ “ವಿಶ್ವಕರ್ಮ ಯುವ ಸಮಾವೇಶ’ವನ್ನು ಬಂಗ್ರಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಜ. 28ರಂದು ಹಮ್ಮಿಕೊಳ್ಳಲಾಗಿದೆ.

Advertisement

ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಹಾಸನ ಜಿಲ್ಲೆ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಳಗ್ಗೆ 6.30ರಿಂದ “ವಿಶ್ವಕರ್ಮ ಮಹಾ ಯಜ್ಞ’ ಜರಗಲಿದೆ. ವಿಶ್ವಕರ್ಮ ಕಲಾ ಸಂಭ್ರಮ ವೈವಿಧ್ಯಮಯ ನೃತ್ಯ ಸ್ಪರ್ಧೆ ಹಾಗೂ ವಿಶ್ವಕರ್ಮ ಕಲಾ ಪ್ರದರ್ಶನ ವಸ್ತು ಪ್ರದರ್ಶನ ನಡೆಯಲಿದೆ. ಬೆಳಗ್ಗೆ 10.30ರಿಂದ ವಿಶ್ವಕರ್ಮ ಯುವ ಸಮಾವೇಶ ಸಂಪನ್ನಗೊಳ್ಳಲಿದೆ ಎಂದು ವಿಶ್ವಕರ್ಮ ಯುವ ಮಿಲನ್‌ ರಾಜ್ಯಾಧ್ಯಕ್ಷ ವಿಕ್ರಮ್‌ ಐ. ಆಚಾರ್ಯ ಹಾಗೂ ವಿಶ್ವಕರ್ಮ ಯಜ್ಞ ಯುವ ಸಮಾವೇಶ ಸಮಿತಿಯ ಅಧ್ಯಕ್ಷ ನಾಗರಾಜ್‌ ಆಚಾರ್ಯ ಮಂಗಳಾದೇವಿ, ಪ್ರಧಾನ ಕಾರ್ಯದರ್ಶಿ ಸುಂದರ ಆಚಾರ್ಯ ಮರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next