Advertisement

ಒಮ್ಮನಸ್ಸಿನ ಕೊರತೆ ನೀಗಿಸಲು ಸಕಾಲ

08:45 AM Aug 29, 2017 | Team Udayavani |

ಉಡುಪಿ: ನಮ್ಮ ದೇಶ ಈಗಾಗಲೇ ಬಹಳಷ್ಟು ಎತ್ತರಕ್ಕೆ ಏರಬೇಕಾಗಿತ್ತು. ಒಮ್ಮನಸ್ಸಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆ ಕೊರತೆಯನ್ನು ನಾವು ಇನ್ನಾದರೂ ಭರ್ತಿ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಎಲ್ಲಿ ಹೋದರೂ ನಮ್ಮ ದೇಶಕ್ಕೆ ಗೌರವ ಇದೆ. ದೇಶ ನಿಧಾನವಾಗಿ ಹೆಜ್ಜೆ ಮುಂದೆ ಇಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯ ದರ್ಶಿ ಸಂತೋಷ್‌ ಹೇಳಿದರು.ಅವರು ಸೋಮವಾರ ಕಡಿಯಾಳಿ ಕಾತ್ಯಾಯನೀ ಮಂಟಪದಲ್ಲಿ ಕಡಿಯಾಳಿಯ ಉಡುಪಿ ಸಾರ್ವಜನಿಕ  ಶ್ರೀ ಗಣೇಶೋತ್ಸವ ಸಮಿತಿಯ 51ನೇ ವರ್ಷದ ಗಣೇಶೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನವಾದ ಧರ್ಮ ನಮ್ಮದು. ಗಣಪತಿಯ ಲಕ್ಷಣವೇ ಸೃಜನ ಶೀಲತೆ. ಜಗತ್ತಿನ ವಿವಿಧೆಡೆ ಪೂಜಿಸಲ್ಪಡುವ ದೇವ ಗಣಪತಿಯಾಗಿದ್ದಾನೆ ಎಂದರು.   

Advertisement

ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ. ವಸಂತ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಘುಪತಿ ಭಟ್‌, ಭಾರತ್‌ ವಿಕಾಸ್‌ ಪರಿಷತ್‌ ಭಾರ್ಗವ ಶಾಖೆ ಅಧ್ಯಕ್ಷ ಕೆ. ರಘುಪತಿ ಉಪಾಧ್ಯ ಉಪಸ್ಥಿತರಿದ್ದರು. ಆಸರೆಯ ಚೆಕ್‌ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.

ಪ್ರ. ಕಾರ್ಯದರ್ಶಿ ರಾಘವೇಂದ್ರ ಕಿಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್‌ ಕುಲಾಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next