Advertisement

ಕೀಳಾಗಿ ಮಾತನಾಡಿದರೆ ಸುಮ್ಮನಿರಲ್ಲ

07:47 AM Mar 10, 2019 | |

ಶ್ರೀರಂಗಪಟ್ಟಣ: ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗೌರವ ನೀಡುವ ಬದಲು ಸುಮಲತಾ ಅವರ ಬಗ್ಗೆ ಕೇವಲವಾಗಿ ಮಾತನಾಡಿರುವ ಸಚಿವ ರೇವಣ್ಣ ಅವರಿಂದ ಸ್ತ್ರೀಕುಲಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ ಬಾಬು ಆಕ್ರೋಶ ವ್ಯಕ್ತಪಡಿಸಿದರು.

Advertisement

ಯಾರೇ ರಾಜಕೀಯ ಮಾಡಲು ಬಂದರೂ ಎಲ್ಲರಿಗೂ ಸಮಾನವಾದ ಹಕ್ಕಿದೆ, ಭಾರತ ಸುಸಂಸ್ಕೃತ ದೇಶ. ಅದರಲ್ಲಿ ಇಂದು ಮಹಿಳಾ ದಿನಾಚರಣೆ ಹಲವಾರು ಕಡೆ ಆಚರಿಸಲಾಗುತ್ತಿದೆ. ಮಹಿಳೆಯರ ಮೇಲೆ ಶೋಷಣೆ ಮಾಡಬಾರದು ಎಂದು ಹೇಳುವ ಜನ ಸೇವೆಗೆ ಬಂದಿರುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯೊಬ್ಬರು ಓರ್ವ ಮಹಿಳೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಗಂಡ ಸತ್ತು ಒಂದು ತಿಂಗಳಾಗಲಿಲ್ಲ ಆಗಲೆ ರಾಜಕೀಯಕ್ಕೆ ಬಂದಿದ್ದಾರೆ ಎಂದು ಉತ್ತರಿಸುವುದು ಅವರ ಘನತೆಗೆ ತಕ್ಕುದಲ್ಲ ಎಂದು ಮಾತನಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.

ನಟ ಅಂಬರೀಶ್‌ ಇದ್ದಾಗ ಇವರು ಹೀಗೆ ಮಾತಾಡುತ್ತಿರಲಿಲ್ಲ. ಸಚಿವರ ಮನೆ ಹೆಣ್ಣು ಮಕ್ಕಳೂ ರಾಜಕೀಯಕ್ಕೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು. ಹೆಣ್ಣು ಮಕ್ಕಳ ಗೌರವ ಕಾಪಾಡಬೇಕು. ದೇಶ ಆಳಿದ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿವರೆಗೆ ಇಂತಹ ಕೀಳುಮಟ್ಟದ ಮಾತನಾಡಿರುವ ಬಗ್ಗೆ ಎಲ್ಲೂ ಕೇಳಿಲ್ಲ. ಅವರ ಪುತ್ರ ಹೀಗೆ ಮಾತನಾಡುವುದು ಸರಿಯಲ್ಲ. ಸುಮಲತಾ ಪರವಾಗಿ ನಾವಿದ್ದೇವೆ. ಕೂಡಲೇ ಸಚಿವರು ಕ್ಷಮೆ ಯಾಚಿಸದಿದ್ದರೆ ಶನಿವಾರ ಸಚಿವ ರೇವಣ್ಣ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next