Advertisement

ಇದು ದನದ ದೊಡ್ಡಿಯಲ್ಲ, ಸಾರ್ವಜನಿಕ ಬಸ್‌ ತಂಗುದಾಣ!

03:03 PM Jan 03, 2018 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸುಳ್ಯ ಮುಖ್ಯ ರಸ್ತೆಯ ಮಲಯಾಳ ಬಳಿ ಸಾರ್ವಜನಿಕ ಬಸ್‌ ತಂಗುದಾಣವಿದೆ. ಶಿಥಿಲಗೊಂಡ ಈ ತಂಗುದಾಣ ಬಳಕೆಗೆ ಯೋಗ್ಯವಾಗಿಲ್ಲ. ದನದ ದೊಡ್ಡಿಯಂತೆ ಕಾಣುವ ಇದು ಸಾರ್ವಜನಿಕರ ಬಳಕೆಯ ಬಸ್‌ ತಂಗುದಾಣ.

Advertisement

ಸುಬ್ರಹ್ಮಣ್ಯ ನಗರದಿಂದ ಸುಳ್ಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ನಗರದಿಂದ 2. ಕಿ.ಮೀ. ದೂರದಲ್ಲಿ ಮಲಯಾಳದಲ್ಲಿ ಈ ತಂಗುದಾಣವಿದೆ. ಸುಬ್ರಹ್ಮಣ್ಯ ಸ್ಥಳಿಯಾಡಳಿತ ಈ ತಂಗುದಾಣ ನಿರ್ಮಿಸಿದೆ. ಸಾರ್ವಜನಿಕರು ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಂಡು ವಿಶ್ರಾಂತಿ ಪಡೆಯಲು ಅನುಕೂಲವಾಗಿದ್ದ ಈ ತಂಗುದಾಣ ಈಗ ಶಿಥಿಲಗೊಂಡು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.

ತಂಗುದಾಣದ ಮೇಲ್ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಗೋಡೆಯೂ ಶಿಥಿಲಗೊಂಡಿದೆ. ತಂಗುದಾಣದ ಒಳ ಪ್ರವೇಶಿಸಿದರೆ ತ್ಯಾಜ್ಯದ ರಾಶಿಯೇ ಕಣ್ಣಿಗೆ ಬೀಳುತ್ತದೆ. ಸ್ವತ್ಛತೆ ಸ್ವಲ್ಪವೂ ಇಲ್ಲ. ಕಸ-ಕಡ್ಡಿ, ಪ್ಲಾಸ್ಟಿಕ್‌ ವಸ್ತುಗಳು, ಬೈಹುಲ್ಲು ತುಂಬಿ ದನದ ದೊಡ್ಡಿಯಂತಿದೆ ಈ ತಂಗುದಾಣ. ಅಲ್ಲಿ ಕುಳಿತುಕೊಳ್ಳುವುದು ಒತ್ತಟ್ಟಿಗಿರಲಿ, ನಿಲ್ಲುವುದಕ್ಕೂ ಆಗದ ಸ್ಥಿತಿ. ಮಳೆಯಾಲ, ಪೈಲಾಜೆ ಪರಿಸರದವರ ಬಳಕೆಗೆ ಇರುವ ತಂಗುದಾಣವಿದು. ಐನಕಿದು-ಸುಬ್ರಹ್ಮಣ್ಯ ರಸ್ತೆಯಾಗಿ ಪ್ರಯಾಣ ಬೆಳೆಸಿ ಬರುವ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಐನಕಿದು, ಬಾಳುಗೋಡು ಭಾಗದವರು ದೂರದ ಊರುಗಳಿಗೆ ತೆರಳಲು ಇಲ್ಲಿ ಬಸ್ಸಿಗೆ ಕಾಯುತ್ತಾರೆ. ಆ ಭಾಗದ ನಾಗರಿಕರು, ಶಾಲಾ -ಕಾಲೇಜು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ನಿಂತು ವಾಹನಗಳಿಗೆ ಕಾಯಬೇಕು. ಸಂಬಂಧಿಸಿದವರು ಇದರ ದುರಸ್ಥಿಗೆ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ‌ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next