Advertisement

Tax Evasion case: ಎನ್‌ ಕೌಂಟರ್‌ ಸ್ಪೆಷಲಿಸ್ಟ್‌ ಪ್ರದೀಪ್‌ ಶರ್ಮಾ ನಿವಾಸದ ಮೇಲೆ ಐಟಿ ದಾಳಿ

04:39 PM Feb 08, 2024 | Team Udayavani |

ಮುಂಬೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ (ಫೆ.08) ಮುಂಬೈನ ಮಾಜಿ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

Advertisement

ಇದನ್ನೂ ಓದಿ:J&K; ಇಲ್ಲಿ ಕೇಂದ್ರ ಸರಕಾರ ಹೇಳಿಕೊಂಡಿರುವ ಹಾಗೆ ಪರಿಸ್ಥಿತಿ ಇಲ್ಲ: ಒಮರ್ ಅಬ್ದುಲ್ಲಾ

ವಂಚನೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂಬೈನ ಅಂಧೇರಿಯಲ್ಲಿರವ ಪ್ರದೀಪ್‌ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ಪೊಲೀಸ್‌ ಇಲಾಖೆಯಲ್ಲಿ ಎನ್‌ ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಕರೆಯಲ್ಪಡುತ್ತಿದ್ದ ಪ್ರದೀಪ್‌ ಶರ್ಮಾ ಈ ಮೊದಲು ಮನ್‌ ಸುಖ್‌ ಹಿರಾನ್‌ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. 2021ರ ಫೆ.25ರಂದು ಅಂಬಾನಿಯ ಐಶಾರಾಮಿ ಅಂಟಿಲಿಯಾ ನಿವಾಸದ ಸಮೀಪದ ನಿರ್ಜನ ಪ್ರದೇಶದಲ್ಲಿ ಜಿಲೆಟಿನ್‌ ತುಂಬಿದ್ದ ಎಸ್‌ ಯುವಿ ಪತ್ತೆಯಾಗಿತ್ತು. ನಂತರ ಎಸ್‌ ಯುವಿ ಮಾಲೀಕ ಹಿರಾನ್‌ ಶವ ಥಾಣೆ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಎನ್‌ ಐಎ, 2021ರ ಜೂನ್‌ ನಲ್ಲಿ ಪ್ರದೀಪ್‌ ಶರ್ಮಾ ಅವರನ್ನು ಬಂಧಿಸಿತ್ತು ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next