Advertisement

Congress, ಡಿ.ಕೆ.ಶಿವಕುಮಾರ್ ರದ್ದು ಮೂರ್ಖತನದ ಹೇಳಿಕೆ: ದಾಸೋಜು ಶ್ರವಣ್ ಕಿಡಿ

04:12 PM Dec 02, 2023 | Team Udayavani |

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಶಾಸಕರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಮತ್ತು ಡಿಕೆ ಶಿವಕುಮಾರ್ ಅವರು ಆರೋಪ ಮಾಡುತ್ತಿರುವುದು ಅವರ ಮೂರ್ಖತನ ಎಂದು ಬಿಆರ್‌ಎಸ್ ನಾಯಕ ದಾಸೋಜು ಶ್ರವಣ್ ಕಿಡಿ ಕಾರಿದ್ದಾರೆ.

Advertisement

ಈ ರೀತಿಯ ಹೇಳಿಕೆ ನೀಡುವ ಮೂಲಕ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮದೇ ಶಾಸಕರ ಮೇಲೆ ಅವಿಶ್ವಾಸ ಬಿಂಬಿಸುತ್ತಿದ್ದಾರೆ. ಕೆಸಿಆರ್ ಮತ್ತು ಬಿಆರ್‌ಎಸ್ ಪಕ್ಷಕ್ಕೆ ಯಾರ ಬೆಂಬಲವೂ ಬೇಕಾಗಿಲ್ಲ. ನಾವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ ಮತ್ತು ನಾವೇ ಸರ್ಕಾರ ರಚಿಸುತ್ತೇವೆ ಎಂದರು.

ಬಹುತೇಕ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ನುಡಿದಿವೆ. ತೆಲಂಗಾಣದ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next