Advertisement

ಇಸ್ರೋ ಸಾಧನೆಗೆ ಸಲಾಂ;16 ನಿಮಿಷದಲ್ಲಿ ಕಕ್ಷೆಗೆ ,48 ದಿನದ ಬಳಿಕ ಚಂದ್ರನ ಅಂಗಳ ಪ್ರವೇಶ

10:29 AM Jul 23, 2019 | Nagendra Trasi |

ಆಂಧ್ರಪ್ರದೇಶ:ಚಂದ್ರಯಾನ 2 ರಾಕೆಟ್ ಅನ್ನು ಜಿಎಸ್ ಎಲ್ ವಿ ಎಂಕೆIII-ಎಂ1 ಯಶಸ್ವಿಯಾಗಿ ನಭಕ್ಕೆ ಹೊತ್ತೊಯ್ದಿದ್ದು, ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

Advertisement

ಚಂದ್ರನ ಮೇಲ್ಮೈಯನ್ನು ಅಧ್ಯಯನ ನಡೆಸುವ ಭಾರತದ ಐತಿಹಾಸಿಕ ಸಾಧನೆಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ವಿಜ್ಞಾನಿಗಳ ತಂಡ ತಮ್ಮ ವೈಯಕ್ತಿಕ ಸಮಯ ಬದಿಗಿಟ್ಟು ಚಂದ್ರಯಾನ 2 ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಜ್ಞಾನಿಗಳ ಶ್ರಮ ದೇಶ ಹೆಮ್ಮೆ ಪಡುವಂತಾದ್ದು ಎಂದು ಚಂದ್ರಯಾನ 2 ಉಡ್ಡಯನದ ಯಶಸ್ವಿ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಚಂದ್ರಯಾನ 2ರ ಮೊದಲ ಹಂತ ಯಶಸ್ವಿಯಾಗಿದ್ದು, ರಾಕೆಟ್ ಭೂಕಕ್ಷೆಯನ್ನು ಸೇರಿದ್ದು, 48 ದಿನಗಳ ಬಳಿಕ ರಾಕೆಟ್ ಚಂದ್ರನ ಅಂಗಳ ಪ್ರವೇಶಿಸಲಿದೆ ಎಂದು ವಿವರಿಸಿದರು.

ಜಿಎಸ್ ಎಲ್ ವಿ ಎಂಕೆIII-ಎಂ1 ರಾಕೆಟ್ ಮೂರು ಹಂತವನ್ನು ಒಳಗೊಂಡಿದ್ದು, ಒಟ್ಟು 43.3 ಮೀಟರ್ ನಷ್ಟು ಎತ್ತರವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೋಡ ಮುಸುಕಿದ ಆಕಾಶದತ್ತ ಮುಖಮಾಡಿದ್ದ “ಬಾಹುಬಲಿ ರಾಕೆಟ್ 2.43ಕ್ಕೆ ನಭಕ್ಕೆ ಚಿಮ್ಮಿತ್ತು. 3850 ಕೆಜಿ ತೂಕದ ಚಂದ್ರಯಾನ 2 ರಾಕೆಟ್ 16 ನಿಮಿಷಗಳಲ್ಲಿ ವ್ಯೂಮನೌಕೆ ಭೂ ಕಕ್ಷೆ ಸೇರಿತ್ತು ಎಂದು ಶಿವನ್ ಮಾಹಿತಿ ನೀಡಿದರು.

ಆಧುನಿಕ ವೈಜ್ಞಾನಿಕ ಸಂಶೋಧನೆಗೆ ಸಹಕಾರಿಯಾಗಲಿರುವ ಚಂದ್ರಯಾನ 2 ಯಶಸ್ವಿ ಉಡ್ಡಯನದಿಂದ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಬಾಹುಬಲಿ ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳ ತಲುಪಲಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next