Advertisement

Uttarakhand : ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ ನಾಡಿದ್ದೇ ಮಂಡನೆ?

12:39 AM Feb 03, 2024 | Team Udayavani |

ಡೆಹ್ರಾಡೂನ್‌: ಸಮಾನ ನಾಗರಿಕ ಸಂಹಿತೆಯ ಕರಡು ಪ್ರತಿ ತಯಾರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯು ಕರಡುಪ್ರತಿಗೆ ಸಂಬಂಧಿಸಿದ ದಾಖಲೆಯನ್ನು ಶುಕ್ರವಾರ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿಗೆ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ ಪ್ರಕಾಶ್‌ ದೇಸಾಯಿ ಅವರ ಮುಂದಾಳತ್ವದಲ್ಲಿ ಐವರನ್ನೊಳಗೊಂಡ ಸಮಿತಿ, ಏಕರೂಪ ಸಂಹಿತೆಯ ಕರಡುಪ್ರತಿಗೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಕೈಗೆ ಹಸ್ತಾಂತರಿಸಿದೆ. ಇದೇ 5ರಿಂದ 8ರವರೆಗೆ ಉತ್ತರಾಖಂಡ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಅದೇ ಸಮಯದಲ್ಲಿ ಇದು ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಕರಡುಪ್ರತಿ ಸಲ್ಲಿಕೆಯಾದ ಬಳಿಕ ಮಾತನಾಡಿದ ಸಿಎಂ ಧಾಮಿ, 2022ರಲ್ಲಿ ವಿಧಾನಸಭಾ ಚುನಾವಣೆಯ

Advertisement

ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳ ಈಡೇರಿಕೆಯ ಬದ್ಧತೆಯ ನಿಟ್ಟಿನಲ್ಲಿ ಇದು ಮತ್ತೂಂದು ಹೆಜ್ಜೆಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next