Advertisement

ಎಲ್ಲಾ ಬಿಟ್ಟು ಸಿನ್ಮಾ ನೋಡ್ತಾರೆ ಸರ್ಜಾ ಬ್ರದರ್ಸ್‌

08:59 AM Sep 21, 2018 | Team Udayavani |

ಮೇಘನಾ ರಾಜ್‌ ಅಭಿನಯದ “ಇರುವುದೆಲ್ಲವ ಬಿಟ್ಟು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಮೇಘನಾರಾಜ್‌ ಮದುವೆಯಾದ ಬಳಿಕ ತೆರೆಗೆ ಬರುತ್ತಿರುವ ಮೊದಲ ಚಿತ್ರವಿದು. ಅನುಪಮ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ನಟರಾದ ಧ್ರುವ ಸರ್ಜಾ ಹಾಗು ಚಿರಂಜೀವಿ ಸರ್ಜಾ ಅವರು ಸೆಪ್ಟೆಂಬರ್‌ 21ರಂದು ಅನುಪಮ ಚಿತ್ರಮಂದಿರದಲ್ಲಿ  ಮೊದಲ ಪ್ರದರ್ಶನವನ್ನು ಪ್ರೇಕ್ಷಕರ ನಡುವೆಯೇ ಚಿತ್ರ ವೀಕ್ಷಿಸುತ್ತಿದ್ದಾರೆ.

Advertisement

“ಇರುವುದೆಲ್ಲವ ಬಿಟ್ಟು’ ಚಿತ್ರದ ಶೀರ್ಷಿಕೆಗೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಅಡಿಬರಹವಿದೆ. “ಇದೊಂದು ವಾಸ್ತವತೆಯ ಚಿತ್ರವಾಗಿದ್ದು, ನಮ್ಮದೆಲ್ಲವನ್ನೂ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಹೊರಟಾಗ, ಆಗುವ ಸಮಸ್ಯೆಗಳು, ಅನುಭವಿಸುವ ನೋವುಗಳೇ ಚಿತ್ರದ ಕಥಾವಸ್ತು  ಚಿತ್ರಕ್ಕೆ ಕಾಂತ ಕನ್ನಲ್ಲಿ ನಿರ್ದೇಶಕರು. ದೇವರಾಜ್‌ ದಾವಣಗೆರೆ ನಿರ್ಮಾಪಕರು. ಚಿತ್ರದಲ್ಲಿ ತಿಲಕ್‌ ಮತ್ತು ಶ್ರೀ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನೀಡಿದ್ದಾರೆ. “ರಂಗಿತರಂಗ’ ಖ್ಯಾತಿಯ ಛಾಯಾಗ್ರಾಹಕ ವಿಲಯಮ್‌ ಡೇವಿಡ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next