Advertisement

ಕಾಂಗ್ರೆಸ್‌, ದೇಶದ್ರೋಹಿಗಳಿಗೆ ಜಾಗವಿಲ್ಲ: ಸಂಸದೆ ಪ್ರಜ್ಞಾ ಠಾಕೂರ್‌

11:36 PM Oct 16, 2021 | Team Udayavani |

ಭೋಪಾಲ್‌: ಕಾಂಗ್ರೆಸ್‌ ಮತ್ತು ದೇಶದ್ರೋಹಿಗಳಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದು ಮಧ್ಯಪ್ರದೇಶ ಸಂಸದೆ ಪ್ರಜ್ಞಾ ಠಾಕೂರ್‌ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ.

Advertisement

ಶುಕ್ರವಾರ ಸಂಜೆ ದಕ್ಷಿಣ ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ ಶಾಸಕ ಪಿ.ಸಿ.ಶರ್ಮಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಜ್ಞಾ, “ನಾನು ಕೋವಿಡ್‌ದಿಂದ ಬಳಲುತ್ತಿದ್ದಾಗ, ನಾನು ಕಾಣೆಯಾಗಿದ್ದೇನೆ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಆ ರೀತಿ ಪೋಸ್ಟರ್‌ ಹಾಕಿದವರು ಇಂದು ಶಾಸಕರಾಗಿ ಕುಳಿತಿದ್ದಾರೆ’ ಎಂದು ವೇದಿಕೆಯಲ್ಲಿದ್ದ ಶರ್ಮಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಇತ್ತೀಚೆಗೆ, ಪ್ರಜ್ಞಾ ಅವರು ಕಬ್ಬಡ್ಡಿ ಆಡಿದ್ದ ವಿಡಿಯೋವೊಂದು ವೈರಲ್‌ ಆಗಿದ್ದ ಬಗ್ಗೆಯೂ ಮಾತನಾಡಿರುವ ಅವರು, “ನಾನು ಕಬ್ಬಡ್ಡಿ ಆಡಿದ್ದನ್ನು ವಿಡಿಯೋ ಮಾಡಿ ಹರಿಬಿಟ್ಟವರು ರಾವಣನಂತೆ. ನಿಮ್ಮೊಳಗೆ ರಾವಣನಿದ್ದಾನೆ. ನಿಮ್ಮಲ್ಲಿ ಹಾಳಾಗಿರುವ ಸಂಸ್ಕಾರವನ್ನು ನೀವು ಸರಿ ಮಾಡಿಕೊಳ್ಳದಿದ್ದರೆ, ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next