Advertisement

IPL-2024: ಮುಂಬೈಗೆ ಮರಳಿ ರೋಹಿತ್‌ ನಾಯಕ? ಅಥವಾ ಬುಮ್ರಾ?

12:07 AM Dec 24, 2023 | Team Udayavani |

ಮುಂಬಯಿ: ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ತಂಡ ದಿಂದ ಮರಳಿ ಮುಂಬೈ ಇಂಡಿಯನ್ಸ್‌ಗೆ ಕರೆತಂದದ್ದು, ರೋಹಿತ್‌ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್‌ಗೆ ಮುಂಬೈ ನಾಯಕತ್ವ ವಹಿಸಿದ್ದೆಲ್ಲ 2024ರ ಐಪಿಎಲ್‌ ಸೀಸನ್‌ನ “ಬಿಗ್‌ ಬ್ರೇಕಿಂಗ್‌ ನ್ಯೂಸ್‌’ ಆಗಿತ್ತು. ಇದೀಗ ಇದಕ್ಕೂ ಮಿಗಿಲಾದ ಸುದ್ದಿಯೊಂದು ಸ್ಫೋಟಗೊಂಡಿದೆ. ಪಾದದ ಗಾಯದಿಂದ ಚೇತರಿಸಿಕೊಳ್ಳಲಾಗದ ಕಾರಣ ಪಾಂಡ್ಯ ಮುಂದಿನ ಐಪಿಎಲ್‌ನಲ್ಲಿ ಆಡುವುದು ಅನುಮಾನವಂತೆ! ಕಳೆದ ವಿಶ್ವಕಪ್‌ ಕೂಟದ ಬಾಂಗ್ಲಾ ದೇಶ ವಿರುದ್ಧದ ಪುಣೆ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಹಾರ್ದಿಕ್‌ ಪಾಂಡ್ಯ ಅವರ ಪಾದಕ್ಕೆ ಗಂಭೀರ ಏಟಾಗಿತ್ತು. ಹೀಗಾಗಿ ಅವರು ವಿಶ್ವಕಪ್‌ನ ಮುಂದಿನ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯ ವಾಯಿತು. ಆಸ್ಟ್ರೇಲಿಯ ಸರಣಿಗೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಆಯ್ಕೆ ಆಗಲಿಲ್ಲ. ಮುಂದಿನ ತಿಂಗಳು ಅಫ್ಘಾನಿಸ್ಥಾನ ವಿರುದ್ಧ ಏರ್ಪಡುವ ಟಿ20 ಸರಣಿಯಿಂದಲೂ ದೂರ ಉಳಿಯಬೇಕಾದೀತು.

Advertisement

ಆದರೆ ಶನಿವಾರ ಬಿಸಿಸಿಐ ಮೂಲ ವೊಂದರಿಂದ ಹೊರಬಿದ್ದ ಸುದ್ದಿಯಂತೆ, ಹಾರ್ದಿಕ್‌ ಪಾಂಡ್ಯ 2024ರ ಐಪಿಎಲ್‌ನಲ್ಲೂ ಆಡುವ ಸಾಧ್ಯತೆ ಇಲ್ಲ! ಐಪಿಎಲ್‌ ಆರಂಭಕ್ಕೆ 3 ತಿಂಗಳಿರುವಾಗಲೇ ಪಾಂಡ್ಯ ಗೈರಿನ ಕುರಿತು ನಿಖರವಾಗಿ ಹೇಳಲು ಹೇಗೆ ಸಾಧ್ಯ? ಈ ಸುದೀರ್ಘ‌ ಅವಧಿಯಲ್ಲೂ ಪಾಂಡ್ಯ ಅವರ ಚೇತರಿಕೆ ಅಸಾಧ್ಯವೇ? ಅವರಿಗೆ ಪಾದದ ಶಸ್ತ್ರಚಿಕಿತ್ಸೆಯ ಅಗತ್ಯ ವಿದೆಯೇ? ಎಂಬುದೆಲ್ಲ ಇಲ್ಲಿ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುವ ಪ್ರಶ್ನೆಗಳು. ಆದರೆ ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಎರಡರಿಂದ 3 ತಿಂಗಳ ಅಗತ್ಯ ವಿದೆ ಎಂದು ವರದಿಯೊಂದು ತಿಳಿಸಿದೆ.

ತಂಡದಲ್ಲಿ ಅಸಮಾಧಾನ
ಪಾಂಡ್ಯ ಆಗಮನದಿಂದ ಮುಂಬೈ ಪಾಳೆಯದಲ್ಲಿ ಅಸಮಾಧಾನ ಹೊಗೆಯಾ ಡಿದ್ದು ರಹಸ್ಯವೇನಲ್ಲ. ರೋಹಿತ್‌ ಅವ ರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣ ಮುಂಬೈ ಅಭಿಮಾನಿಗಳೂ ಗರಂ ಆಗಿದ್ದಾರೆ. ಇದೀಗ ಪಾಂಡ್ಯ ಅನ್‌ಫಿಟ್‌ ಎಂಬ ಸುದ್ದಿ ಮುಂಬೈ ಇಂಡಿಯನ್ಸ್‌ಗೆ ಹೇಗೆ ಟ್ವಿಸ್ಟ್‌ ಕೊಟ್ಟಿàತು ಎಂಬುದು ತೀವ್ರ ಕುತೂಹಲದ ಸಂಗತಿ.

ನಾಯಕ ಯಾರು?
ಒಂದು ವೇಳೆ ಹಾರ್ದಿಕ್‌ ಪಾಂಡ್ಯ ಐಪಿಎಲ್‌ ಆಡದೇ ಹೋದರೆ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಮುಖ್ಯ ಪ್ರಶ್ನೆ. ಮರಳಿ ರೋಹಿತ್‌ ಶರ್ಮ ಅವರಿಗೆ ನಾಯಕತ್ವ ನೀಡಬಹುದೇ? ಒಮ್ಮೆ ಕೆಳಗಿಳಿಸಿದ ಕಾರಣ ರೋಹಿತ್‌ ಪುನಃ ಜವಾಬ್ದಾರಿ ವಹಿಸಲು ಒಪ್ಪುವರೇ? ಗೊಂದಲ ಸಹಜ. ಇಲ್ಲವೇ ನಾಯಕತ್ವದ ಉಮೇದಿನಲ್ಲಿದ್ದ ಜಸ್‌ಪ್ರೀತ್‌ ಬುಮ್ರಾಗೆ ಈ ಜವಾಬ್ದಾರಿ ಲಭಿಸೀತು.
ಕಳೆದೆರಡು ಋತುಗಳಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಹಾರ್ದಿಕ್‌ ಪಾಂಡ್ಯ ಅವರದು. ಅನಿರೀಕ್ಷಿತ ಹಾಗೂ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರನ್ನು 15 ಕೋಟಿ ರೂ. ಮೊತ್ತಕ್ಕೆ ಮುಂಬೈಗೆ ಟ್ರೇಡ್‌ ಮಾಡಲಾಯಿತು. ಇಷ್ಟೊಂದು ಹಣ ಸುರಿದ ಮೇಲೆ ಆಡಲು ಸಾಧ್ಯವಿಲ್ಲ ಎಂದಾದರೆ ಇದರಿಂದ ಮುಂಬೈಗೆ ಹಿನ್ನಡೆ ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next