Advertisement

“ಕರಿಯ ಜೀವಗಳಿಗೂ ಬೆಲೆಯಿದೆ’ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

07:37 AM Oct 27, 2020 | mahesh |

ಅಬುಧಾಬಿ: ಮುಂಬೈ ಇಂಡಿಯನ್ಸ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ “ಕರಿಯ ಜೀವಗಳಿಗೂ ಬೆಲೆಯಿದೆ’ (ಬಿಎಲ್‌ಎಂ) ಅಭಿಯಾನಕ್ಕೆ ಕೈಜೋಡಿಸಿ ದ್ದಾರೆ. ಅವರು ಐಪಿಎಲ್‌ನಲ್ಲಿ ಈ ಅಭಿಯಾನಕ್ಕೆ ಕೈಜೋಡಿಸಿದ ಮೊದಲ ಆಟಗಾರ.

Advertisement

ಕೆಲವೇ ದಿನಗಳ ಹಿಂದೆ ಹೈದರಾಬಾದ್‌ ತಂಡದ ವೇಗಿ ಜಾಸನ್‌ ಹೋಲ್ಡರ್‌, ಈ ಐಪಿಎಲ್‌ನಲ್ಲಿ ಯಾರೂ ಬಿಎಲ್‌ಎಂ ಅಭಿಯಾನಕ್ಕೆ ಕೈಜೋಡಿಸಿಲ್ಲ ಎಂದು ನೊಂದುಕೊಂಡಿದ್ದರು. ಇದರ ಬೆನ್ನಲ್ಲೇ ರವಿವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅರ್ಧ ಶತಕ ಪೂರೈಸಿದಾಗ ಮಂಡಿಯೂರಿ ಕುಳಿತು, ಬಲಗೈ ಮೇಲೆತ್ತಿ ತಾನೂ ಅಭಿಯಾನದ ಜತೆಗಿದ್ದೇನೆ ಎಂದು ಸಾರಿದರು. ಇದನ್ನು ಪೊಲಾರ್ಡ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next