Advertisement

ಮಾ. 29: ಮಂಗಳೂರಿನಲ್ಲಿ ಗಂಧದ ಕುಡಿ ಕಲರವ

12:35 AM Mar 23, 2019 | Team Udayavani |

ಕಟಪಾಡಿ: ದೇಶ ವಿದೇಶಗಳಲ್ಲಿ 21 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಬಹು ನಿರೀಕ್ಷಿತ ಗಂಧದ ಕುಡಿ ಚಲನಚಿತ್ರವು ಮಾ. 29ರಂದು ಮಂಗಳೂರು ಸಹಿತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Advertisement

ಬಿಡುಗಡೆಯ ಪ್ರಯುಕ್ತ ಮಂಗಳೂರಿನ ಕೆನರಾ ಸಿಬಿಎಸ್‌ಸಿ ಶಾಲೆಯ ಆವರಣದಲ್ಲಿ “ಗಂಧದ ಕುಡಿ ಕಲರವ’ ಎಂಬ ವಿಶೇಷ ಕಾರ್ಯಕ್ರಮ ಸಂಜೆ 4.30ಕ್ಕೆ ನಡೆಯಲಿದೆ.

ವಿಭಿನ್ನ ಸಾಂಸ್ಕೃತಿಕ ವೈಭವಗಳೊಂದಿಗೆ ನಡೆಯುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಹಿರಿಯ ನಟರಾದ ದೊಡ್ಡಣ್ಣ, ರಮೇಶ್‌ ಭಟ್‌, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಶಿವಧ್ವಜ್‌, ಜ್ಯೋತಿ ರೈ, ಕನ್ನಡ ಹಾಗೂ ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ದಕ್ಷಿಣ ಭಾರತದ ಖ್ಯಾತ ಗಾಯಕಿ ಶ್ರೇಯಾ ಜೈದೀಪ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮೆರುಗು ನೀಡಲು ಕರಾವಳಿಯ ಖ್ಯಾತ ಗಾಯಕ ಪ್ರಕಾಶ್‌ ಮಹಾದೇವನ್‌ ತಂಡದಿಂದ ಸಂಗೀತ ಸಂಜೆ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಜೂನಿಯರ್‌ ವಿಷ್ಣುವರ್ಧನ್‌ ತಂಡದಿಂದ ಮಿಮಿಕ್ರಿ, ಹಾಡು ಮತ್ತು ಮಂಗಳೂರಿನ ಖ್ಯಾತ ತಂಡಗಳಿಂದ ನೃತ್ಯ ವೈಭವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next