Advertisement

ಬಡ್ಡಿ ಮನ್ನಾ ಮಾಡಿದ್ರೆ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿರೂ. ನಷ್ಟ

02:39 PM Jun 05, 2020 | Hari Prasad |

ಹೊಸದಿಲ್ಲಿ: ದೇಶದ ಸರ್ವೋಚ್ಚ ಬ್ಯಾಂಕ್‌ ಆರ್‌ಬಿಐ, ಸರ್ವೋಚ್ಚ ನ್ಯಾಯಾಲಯಕ್ಕೆ ಮಹತ್ವದ ಪ್ರಮಾಣಪತ್ರ ಸಲ್ಲಿಸಿದೆ.

Advertisement

ಕೋವಿಡ್ ಕಾರಣ ಸಾಲದ ಕಂತು ಪಾವತಿ ಮುಂದೂಡಲು ಅದು ಬ್ಯಾಂಕ್‌ಗಳ ಗ್ರಾಹಕರಿಗೆ ಅವಕಾಶ ನೀಡಿತ್ತು.

ಆದರೆ ಈ ವೇಳೆಯ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.

ಒಂದು ವೇಳೆ ಹಾಗೆ ಮಾಡಿದರೆ, ಬ್ಯಾಂಕ್‌ಗಳು ಅಧೋಗತಿಗಿಳಿಯಲಿವೆ. ಅವುಗಳು ಒಟ್ಟಾರೆ 2 ಲಕ್ಷ ಕೋಟಿ ರೂ. ಕಳೆದುಕೊಳ್ಳಲಿವೆ.

ಆದ್ದರಿಂದ ತಾನು ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ತನ್ನ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

Advertisement

ಅಷ್ಟಲ್ಲದೇ ತಾನು ಕೇವಲ ಕಂತು ಪಾವತಿಯನ್ನು ಮುಂದೂಡಲು ಅವಕಾಶ ನೀಡಿದ್ದೇನೆ, ಅದು ಸಾಲಮನ್ನಾ ಅಲ್ಲ ಎಂದು ಸ್ಪಷ್ಟಪಡಿಸಿದೆ. ಜೂ.5ಕ್ಕೆ ಈ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಪೀಠ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next