Advertisement

ರಾಜ್ಯಸಭೆಯಲ್ಲಿ ಇಂದು ತಲಾಖ್‌ ಮಸೂದೆ ಮಂಡನೆ

09:35 AM Jan 02, 2018 | Team Udayavani |

ಹೊಸದಿಲ್ಲಿ: ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ತ್ರಿವಳಿ ತಲಾಖ್‌ ಮಸೂದೆಯು ರಾಜ್ಯಸಭೆಯಲ್ಲಿ ಮಂಗಳವಾರ ಮಂಡನೆಯಾಗಲಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಇದನ್ನು ಮಂಡಿಸಲಿದ್ದಾರೆ. ಮಸೂದೆಯಲ್ಲಿ, ತ್ರಿವಳಿ ತಲಾಖ್‌ ಅನ್ನು ಕಾನೂನುಬಾಹಿರ ಎಂದು ಘೋಷಿಸಿರುವುದಲ್ಲದೆ, ಹೀಗೆ ವಿಚ್ಛೇದನ ನೀಡಿದ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶ ಒಳಗೊಂಡಿರುವುದನ್ನು ಕಾಂಗ್ರೆಸ್‌ ಹಾಗೂ ವಿಪಕ್ಷಗಳು ವಿರೋಧಿಸಿವೆ. ಹಾಗಿದ್ದರೂ ಈ ಮಸೂದೆಗೆ ಬಿಜೆಪಿ ಹಾಗೂ ಮಿತ್ರಪಕ್ಷಗಳ ಸಂಖ್ಯಾಬಲವಿರುವ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆದರೀಗ, ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಸಂಖ್ಯೆ ಹೆಚ್ಚಿರುವ ರಾಜ್ಯಸಭೆಯಲ್ಲಿ ಈ ಮಸೂದೆ ಸಲೀಸಾಗಿ ಅನುಮೋದನೆಗೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದ್ದು, ಮಂಗಳವಾರದ ರಾಜ್ಯಸಭೆ ಕಲಾಪ ಕುತೂಹಲ ಕೆರಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next