Advertisement

“ಒಳಜಗಳ ಈಗ ಬಹಿರಂಗ’

10:59 PM Aug 23, 2019 | Lakshmi GovindaRaj |

ಬಳ್ಳಾರಿ: ಕಾಂಗ್ರೆಸ್‌- ಜೆಡಿಎಸ್‌ ಮಧ್ಯೆ ಮೊದಲಿನಿಂದಲೂ ಭಿನ್ನಮತ ಇತ್ತು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ನಡುವೆ ವೈಮನಸ್ಸಿತ್ತು. ಬಿಜೆಪಿಗೆ ಅ ಧಿಕಾರ ನೀಡಬಾರದು ಎಂಬ ಒಂದೇ ಉದ್ದೇಶದಿಂದ ಮೈತ್ರಿ ಸರ್ಕಾರ ರಚನೆ ಮಾಡಲಾಗಿತ್ತು. ಈಗ ಅವರಲ್ಲಿದ್ದ ಒಡಕು ಬಹಿರಂಗ ವಾಗುತ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರದ ಅವ ಧಿ ಯಲ್ಲಿ ಸಿದ್ದರಾಮಯ್ಯನವರು ನಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದರು. ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದರೂ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೆ ಉಭಯ ಪಕ್ಷಗಳ ಶಾಸಕರು ಸಹ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದರು. ಇವರ ವೈಮನಸ್ಸು, ಒಳಜಗಳದಿಂದಲೇ ಮೈತ್ರಿ ಸರಕಾರ ಅಧಿಕಾರ ಕಳೆದುಕೊಂಡಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next