Advertisement

ಸ್ಕೂಟರ್‌ಗಳಿಗೆ ಇನ್ನೋವಾ ಕಾರು ಢಿಕ್ಕಿ : ವ್ಯಕ್ತಿ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

08:53 PM Apr 19, 2023 | Team Udayavani |

ಕಾಸರಗೋಡು: ಶಬರಿಮಲೆ ತೀರ್ಥಾಟಕರು ಸಂಚರಿಸುತ್ತಿದ್ದ ಇನ್ನೋವಾ ಕಾರು ಎರಡು ಸ್ಕೂಟರ್‌ಗಳಿಗೆ ಢಿಕ್ಕಿ ಹೊಡೆದು ಓರ್ವ ಸಾವಿಗೀಡಾಗಿ, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Advertisement

ಬಂದಡ್ಕ ಪಾಲಾರ್‌ ನಿವಾಸಿ ಶಿವರಾಮ (54) ಸಾವಿಗೀಡಾದರು. ಇನ್ನೊಂದು ಸ್ಕೂಟರ್‌ನಲ್ಲಿದ್ದ ಜಯೇಶ್‌ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಬೆಳಗ್ಗೆ 7.30ಕ್ಕೆ ಮಾಣಿಮೂಲೆಯಲ್ಲಿ ಕಾರು ಢಿಕ್ಕಿ ಹೊಡೆದಿದೆ. ಶಬರಿಮಲೆ ತೀರ್ಥಾಟನೆಯ ಬಳಿಕ ವಾಪಸಾಗುತ್ತಿದ್ದ ಕರ್ನಾಟಕ ನಿವಾಸಿಗಳು ಸಂಚರಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ಎರಡು ಸ್ಕೂಟರ್‌ಗಳಿಗೆ ಢಿಕ್ಕಿ ಹೊಡೆಯಿತು. ಇನ್ನೋವಾ ಕಾರಿನಲ್ಲಿ ಚಾಲಕ ರವಿ ಕುಮಾರ್‌ ಸಹಿತ ಏಳು ಮಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next