Advertisement

ರಾಜ್ಯ ಸರಕಾರದ ಯೋಜನೆಗಳ ಮಾಹಿತಿ

08:55 AM Jul 27, 2017 | Team Udayavani |

ಉಡುಪಿ: ಐರೋಡಿ ಗ್ರಾಮದ ಅಲ್ಸೆಬೆಟ್ಟುವಿನಲ್ಲಿ ಉಡುಪಿ ಜಿಲ್ಲಾ ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆ ವತಿಯಿಂದ ರಾಜ್ಯ ಸರಕಾರದ ಯೋಜನೆಗಳ ಮಾಹಿತಿ ಅಭಿಯಾನ ಕಾರ್ಯಾಗಾರ ನಡೆಯಿತು.

Advertisement

ಉಡುಪಿ ಜಿಲ್ಲಾ ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್‌ ಅವರು ಮಾತನಾಡಿ, ಗ್ರಾಮೀಣ ಜನರಿಂದಲೇ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಎಲ್ಲ ಕೆಲಸ ಕಾರ್ಯಗಳಿಗೂ ಜನ ಪ್ರತಿನಿಧಿಗಳನ್ನೇ ಅವಲಂಬಿಸಬಾರದು. ಪ್ರತೀ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಜಿ.ಪಂ. ವ್ಯಾಪ್ತಿಯ ಸಂಯೋಜಕ ವೈ.ಬಿ. ರಾಘವೇಂದ್ರ ಅವರು ಸರಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಉಡುಪಿ ಜಿಲ್ಲಾಸ್ಪತ್ರೆಯ ಸರಕಾರಿ ಯೋಜನೆಗಳ ಸಂಯೋಜಕ ಸಚ್ಚಿದಾನಂದ ಅವರು ಮಾತನಾಡಿ ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯಭಿಮಾ ಯೋಜನೆ ಮೊದಲಾದ ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. 

ಪಂಚಾಯತ್‌ ಸದಸ್ಯ ಫ್ಲೋರಿನ್‌ ಲೂವಿಸ್‌, ಪದ್ಮಾವತಿ, ಆನಂದ ಗಾಣಿಗ, ಮೀನಾಕ್ಷಿ, ಸಂಯೋಜಕರಾದ ನಾಗರಾಜ್‌ ಆಚಾರ್ಯ, ದೇವೇಂದ್ರ ಕೋಟ, ಕೋ-ಆಪರೇಟಿವ್‌ ಬ್ಯಾಂಕಿನ ನಿರ್ದೇಶಕಿ ರೇಖಾ, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next