Advertisement

‌ಮಾಹಿತಿ ಸೋರಿಕೆ ಗಂಭೀರದ್ದು

03:05 AM Jan 21, 2021 | Team Udayavani |

ಹೊಸದಿಲ್ಲಿ: ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡುವುದು ದೇಶದ್ರೋಹವಾಗಿದೆ ಎಂದು  ರಕ್ಷಣ ಖಾತೆ ಮಾಜಿ ಸಚಿವ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣ  ಸಚಿವ ರಾಜನಾಥ್‌ ಸಿಂಗ್‌ ಈ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಾಲಾ ಕೋಟ್‌ ದಾಳಿಗೆ ಸಂಬಂಧಿಸಿದಂತೆ ಮಾಹಿತಿ ಪತ್ರಕರ್ತ ಅರ್ನಾಬ್‌ ಗೋಸ್ವಾಮಿಗೆ ಮುಂಚಿತವಾಗಿಯೇ ಗೊತ್ತಿತ್ತು ಮತ್ತು ಅದಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿರುವ ವಾಟ್ಸ್‌ಆ್ಯಪ್‌ ಚರ್ಚೆಗೆ ಸಂಬಂಧಿಸಿದಂತೆ ಆ್ಯಂಟನಿ ಈ ಮಾತುಗಳನ್ನಾಡಿದ್ದಾರೆ.

Advertisement

“ಸೇನಾ ಕಾರ್ಯಾಚರಣೆಗೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡುವುದು ಕ್ಷಮಾ ರಹಿತ ಅಪರಾಧ. ಅದನ್ನು ದೇಶದ್ರೋಹವೆಂದೇ ಪರಿಗಣಿಸಲಾ ಗುತ್ತದೆ. ಅಂಥ ಕೃತ್ಯವೆಸಗಿದವರನ್ನು ಶಿಕ್ಷಿಸ ಬೇಕು’ ಎಂದು ಆ್ಯಂಟನಿ ಹೇಳಿದ್ದಾರೆ.

ದೇಶದ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಪ್ರಧಾನಿಗಳ ಕಾರ್ಯಾಲಯ, ಗೃಹ ಸಚಿವರು, ಕಾನೂನು ಸಚಿವರು, ವಾರ್ತಾ ಮತ್ತು ಪ್ರಸಾರ

ಸಚಿವರ ಕಾರ್ಯಾಲಯಗಳಲ್ಲಿಯೂ   ರಾಷ್ಟ್ರೀಯ ಭದ್ರತೆಯ ವಿಚಾರಗಳಿಗೆ ಸಂಬಂಧಿಸಿದಂತೆ ರಾಜಿಯನ್ನೇ ಮಾಡಿಕೊಳ್ಳಲಾಗಿದೆ ಎಂದರು ಆ್ಯಂಟನಿ.

Advertisement

Udayavani is now on Telegram. Click here to join our channel and stay updated with the latest news.

Next