Advertisement

ಒಳನುಸುಳಿದ ಪಾಕ್‌ ಯೋಧರು ಫಿನಿಶ್‌

12:30 AM Jan 01, 2019 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ನೌಗಾಂವ್‌ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳಿ ದಾಳಿ ನಡೆಸಲು ಪಾಕ್‌ ಸೇನೆ ನಡೆಸಿದ ಪ್ರಯತ್ನವನ್ನು ಭಾರತೀಯ ಪಡೆ ವಿಫ‌ಲಗೊಳಿಸಿದೆ. ಹೊಸ ವರ್ಷದಂದು ದಾಳಿ ನಡೆಸುವ ಉದ್ದೇಶವನ್ನು ಪಾಕಿಸ್ತಾನದ ಗಡಿ ಭದ್ರತಾ ತಂಡವು ಹೊಂದಿತ್ತು ಎನ್ನಲಾಗಿದೆ. ಪಾಕ್‌ನ ಇಬ್ಬರು ಯೋಧರನ್ನು ಹತ್ಯೆಗೈಯಲಾಗಿದ್ದು, ನಿಮ್ಮ ಯೋಧರ ಶವಗಳನ್ನು ವಾಪಸ್‌ ತೆಗೆದುಕೊಂಡು ಹೋಗಿ ಎಂದು ಪಾಕ್‌ಗೆ ಸೂಚಿಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದ ವರೆಗೆ ಗುಂಡಿನ ಚಕಮಕಿ ಮುಂದುವರಿದಿತ್ತು ಎಂದು ಸೇನಾ ಮೂಲಗಳು ಹೇಳಿವೆ.

Advertisement

ಈ ಯೋಧರು ದಟ್ಟ ಅರಣ್ಯದಲ್ಲಿ ಒಳನುಸುಳುವುದಕ್ಕೆ ಸಹಾಯವಾಗಲೆಂದು ಇತರ ಪಾಕ್‌ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ವಿಪರೀತ ಶೀತ ಹಾಗೂ ಮಂಜು ಇದ್ದಿದ್ದರಿಂದಾಗಿ ಒಳನುಸುಳಲು ಯೋಧರಿಗೆ ಅನುಕೂಲವೂ ಆಗಿತ್ತು. ಆದರೆ ಭಾರತೀಯ ಯೋಧರ ಚಾಣಾಕ್ಷತನದಿಂದಾಗಿ ಇವರ ಕಾರ್ಯತಂತ್ರ ವಿಫ‌ಲವಾಗಿದ್ದು, ಒಳನುಸುಳುತ್ತಿದ್ದ ಯೋಧರನ್ನು ಪತ್ತೆ ಹಚ್ಚಿ ಹತ್ಯೆಗೈದಿದೆ. ಯೋಧರ ಬಳಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿದ್ದು, ಇವರು ನೌಗಾಂವ್‌ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಸೋಮವಾರ ಇಡೀ ದಿನ ಈ ಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಪಾಕಿಸ್ತಾನದ ಸೇನೆ ಧರಿಸುವ ಸಾಮಾನ್ಯ ಸಮವಸ್ತ್ರವನ್ನೇ ಇವರು ಹೊಂದಿದ್ದರು. ಭಾರತೀಯ ಸೇನೆಯ ದಿಕ್ಕು ತಪ್ಪಿಸುವುದಕ್ಕಾಗಿ ಈ ಪೈಕಿ ಕೆಲವರು ಭಾರತೀಯ ಸೇನೆಯ ಹಳೆಯ ಸಮವಸ್ತ್ರವನ್ನೂ ಧರಿಸಿದ್ದರು. ಸುಧಾರಿತ ಶಸ್ತ್ರಾಸ್ತ್ರಗಳನ್ನು ಇವರು ಹೊಂದಿದ್ದರು. ಇದೇ ವೇಳೆ ಪಾಕಿಸ್ತಾನ ಸರಕಾರ ಮತ್ತು ಸೇನೆ ಕೂಡ ಭಾರತ ಅಪ್ರಚೋದಿತವಾಗಿ ನಡೆ ಸಿದ ಗುಂಡಿನ ದಾಳಿಯಿಂದ ಮಹಿಳೆ ಅಸುನೀಗಿದ್ದಾಳೆ. ಜತೆಗೆ ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next