Advertisement

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

02:05 AM Apr 28, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ಕಾಳ್ಗಿಚ್ಚು ಶನಿವಾರ ನೈನಿತಾಲ್‌ವರೆಗೆ ಹಬ್ಬಿದೆ. ಗುಡ್ಡ ಪ್ರದೇಶದಲ್ಲಿ ವ್ಯಾಪಿಸಿರುವ ಬೆಂಕಿಯಿಂದಾಗಿ ನೈನಿತಾಲ್‌ ಕೋರ್ಟ್‌ ಕಾಲನಿಯಲ್ಲೂ ಹೊಗೆ ಕಂಡುಬಂದಿದ್ದು, ಬೆಂಕಿ ನಂದಿಸಲು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಸಹಾಯ ವನ್ನು ನೈನಿತಾಲ್‌ ಅರಣ್ಯ ಇಲಾಖೆ ಕೋರಿದೆ.

Advertisement

36 ಗಂಟೆಗಳಿಂದಲೂ ನೈನಿತಾಲ್‌ನ ಕಾಡುಗಳು ಬೆಂಕಿಯಲ್ಲಿ ಬೇಯುತ್ತಿದ್ದು, ಕಾಳ್ಗಿಚ್ಚಿನ ತೀವ್ರತೆ ಹೆಚ್ಚಿ ದಿ ಪೈನ್ಸ್‌ ನಗರದವರೆಗೆ ಹಬ್ಬಿದೆ. ಅಲ್ಲಿರುವ ಹಳೆಯ ಮತ್ತು ಖಾಲಿ ನಿವಾಸ ಒಂದಕ್ಕೂ ಬೆಂಕಿ ಹೊತ್ತಿದ್ದು, ಸೇನಾ ಕಟ್ಟಡದವರೆಗೂ ಬೆಂಕಿ ವ್ಯಾಪಿಸಿದೆ. ಕಾಳ್ಗಿಚ್ಚು ನಂದಿಸಲು ಐಎಎಫ್ ಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸೇನಾ ಸಿಬಂದಿ ಹರಸಾಹಸ ಪಡುತ್ತಿದ್ದಾರೆ.

ನೈನಿತಾಲ್‌ ಜಿಲ್ಲೆಯ ಲಾರಿಯಾ ಕಾಂತಾ ಅರಣ್ಯ ಪ್ರದೇಶದಲ್ಲೂ ಶನಿವಾರ ಮತ್ತೂಂದು ಕಾಳ್ಗಿಚ್ಚು ವರದಿಯಾಗಿದ್ದು, ಐಐಟಿ ಕಟ್ಟಡವೊಂದಕ್ಕೆ ಹಾನಿಯುಂಟಾಗಿದೆ. ಕಳೆದ 1 ವಾರದಲ್ಲಿ ಉತ್ತರಾಖಂಡದ 33.34 ಹೆಕ್ಟೇರ್‌ ಅರಣ್ಯ ಭೂಮಿ ನಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next