Advertisement

ಇಂದ್ರಾಣಿ ನೀರಿನ ಮಾದರಿ ಸಂಗ್ರಹ, ಪರೀಕ್ಷೆಗೆ ಬೆಂಗಳೂರಿಗೆ ರವಾನೆ

01:37 AM Mar 24, 2021 | Team Udayavani |

ಉಡುಪಿ : ನಗರಸಭೆ ವೆಟ್‌ವೆಲ್‌ನಿಂದ ಶುದ್ಧೀಕರಿಸದ ಕೊಳಚೆ ನೀರು ನೇರವಾಗಿ ಇಂದ್ರಾಣಿಗೆ ಹರಿಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರ ಬಂದ ಹಿನ್ನೆಲೆಯಲ್ಲಿ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸೋಮವಾರ ಶಾರದಾ ವೆಟ್‌ವೆಲ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವೆಟ್‌ವೆಲ್‌ಗ‌ಳಿಂದ ಇಂದ್ರಾಣಿಗೆ ಹರಿ ಬಿಡುತ್ತಿರುವ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಕೊಳಚೆ ನೀರು ಇಂದ್ರಾಣಿಗೆ ಬಿಡುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಕಾಮಗಾರಿ ಮುಗಿಯುವವರೆಗೆ ಕೊಳಚೆ ನೀರು ಇಂದ್ರಾಣಿಗೆ ಬಿಡಬೇಕಾಗುತ್ತದೆ. ಬೇರೆ ಮಾರ್ಗವಿಲ್ಲ. ಮುಂದಿನ 25 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ನಗರಸಭೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಉದಯವಾಣಿ ಪತ್ರಿಕೆ ಶಾರದಾ ವೆಟ್‌ವೆಲ್‌ನ ಮೂಲಕ ಶುದ್ಧೀಕರಿಸದ ನೀರು ಇಂದ್ರಾಣಿಗೆ ಬಿಡುತ್ತಿರುವ ಬಗ್ಗೆ ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next