Advertisement

ಮೈಸೂರು ಅತ್ಯಾಚಾರ  ಪೊಲೀಸ್, ರಾಜಕಾರಣಿಗಳ ವೈಫಲ್ಯಕ್ಕೆ ಸಾಕ್ಷಿ : ಇಂದ್ರಜಿತ್ ಲಂಕೇಶ್

05:01 PM Aug 27, 2021 | Team Udayavani |

ಮೈಸೂರು: ನಗರದಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರ ವೈಫಲ್ಯದ ಜೊತೆಗೆ ರಾಜಕಾರಣಿಗಳ ಹಸ್ತಕ್ಷೇಪವು ಇದೆ ಎಂದು ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

Advertisement

ನಗರದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರನ್ನು ಹೊಣೆಗಾರರನ್ನಾಗಿಸಲು ಆಗಲ್ಲ. ಈ ಘಟನೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವು ಇದೆ. ಇದರಿಂದಲೇ ಈ ರೀತಿಯ ಘಟನೆ ಆಗುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಅದರಂತೆ ಇವತ್ತು ನಿಮಗೆ ಸಾಕ್ಷಿ ಸಮೇತ ಮಾಹಿತಿ ಸಿಗುತ್ತಿದೆ‌ ನೋಡಿ. ಐತಿಹಾಸಿಕ ಹಿನ್ನಲೆ ಇರುವ ಮೈಸೂರು ಇಂದು ಈ ಸ್ಥಿತಿಗೆ ಬಂದಿದೆ. ನಾನು ಕೂಡ ಮೈಸೂರಿನಲ್ಲಿ ಶೂಟಿಂಗ್‌ ಮಾಡಿದ್ದೇನೆ. ಆದರೆ, ಇಂದು ಇದೇ ಮೈಸೂರಿನಲ್ಲಿ ಹಲ್ಲೆಗಳಾಗಿದೆ, ದರೋಡೆ, ಗ್ಯಾಂಗ್ ರೇಪ್ ಘಟನೆ ಆಗಿದೆ‌. ಇದು ಮೈಸೂರನ್ನ ಡಿಸ್ಟರ್ಬ್ ಮಾಡಿದೆ ಎಂದರು.

ರಾಜಕಾರಣಿಗಳು ಮೈಸೂರನ್ನು ತಾಲಿಬಾನ್‌ ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೇ ಕೆಲವರು ಯುವಕ ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ಈ ಮಧ್ಯೆ ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರು ನೋಡ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next