Advertisement

ಇಂಡೋನೇಶ್ಯ ಮಾಸ್ಟರ್: ಸೈನಾ ಏಕೈಕ ಆಶಾಕಿರಣ

12:30 AM Jan 26, 2019 | |

ಜಕಾರ್ತಾ: “ಇಂಡೋನೇಶ್ಯ ಮಾಸ್ಟರ್’ ಬ್ಯಾಡ್ಮಿಂಟನ್‌ ಕೂಟದಲ್ಲಿ ಸೈನಾ ನೆಹ್ವಾಲ್‌ ಗೆಲುವಿನ ಆಟ ಮುಂದುವರಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿ ನಿರಾಶೆ ಮೂಡಿಸಿದ್ದಾರೆ. 

Advertisement

8ನೇ ಶ್ರೇಯಾಂಕಿತ ಸೈನಾ ಹೆಚ್ಚು ಬೆವರಿಳಿಸದೆ ಥಾಯ್ಲೆಂಡ್‌ನ‌ ಪೌಣ್‌ìಪವೀ ಚೊಚುವಾಂಗ್‌ ಅವರ ವಿರುದ್ಧ 21-7, 21-18 ಗೇಮ್‌ಗಳಿಂದ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಸೈನಾ ಚೀನದ ಹಿ ಬಿಂಗ್‌ಜಿಯೊ ಅವರನ್ನು ಎದುರಿಸಲಿದ್ದಾರೆ. ಮೊದಲ ಗೇಮನ್ನು ಉತ್ತಮವಾಗಿ ಆರಂಭಿಸಿದ ಸೈನಾ ವಿರಾಮದ ವೇಳೆ 11-4 ಅಂಕಗಳ ಮುನ್ನಡೆಯಲ್ಲಿದ್ದರು. 2ನೇ ಗೇಮ್‌ನಲ್ಲಿ ಚೊಚುವಾಂಗ್‌ 8-4 ಮುನ್ನಡೆ ಗಳಿಸಿದರೂ ಬಳಿಕ ಚುರುಕಿನ ಆಟವಾಡಿದ ಸೈನಾ ಮುನ್ನುಗ್ಗುವಲ್ಲಿ ಯಶಸ್ವಿಯಾದರು.

ಮುಗ್ಗರಿಸಿದ ಸಿಂಧು, ಶ್ರೀಕಾಂತ್‌
ಸ್ಪೇನ್‌ನ ಬ್ಯಾಡ್ಮಿಂಟನ್‌ ತಾರೆ ಕ್ಯಾರೋಲಿನ್‌ ಮರಿನ್‌ ಎದುರು ಮಂಕಾದ ಸಿಂಧು 11-21, 12-21 ಗೇಮ್‌ಗಳಿಂದ ಸೋಲನುಭವಿಸಿದರು. ಮೊದಲ ಗೇಮ್‌ ಆರಂಭದಲ್ಲೇ ಪ್ರಾಬಲ್ಯ ಮೆರೆದ ಮರಿನ್‌, ಸಿಂಧುಗೆ ಹೆಚ್ಚಿನ ಅವಕಾಶ ನೀಡದೆ ಸುಲಭದಲ್ಲಿ ಗೆದ್ದರು. ಎರಡನೇ ಗೇಮ್‌ನಲ್ಲೂ ಮರಿನ್‌ಗೆ ಪೈಪೋಟಿ ನೀಡಲು ಸಿಂಧು ವಿಫ‌ಲರಾದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಏಕೈಕ ಆಟಗಾರ ಕೆ. ಶ್ರೀಕಾಂತ್‌ ಸ್ಥಳೀಯ ಆಟಗಾರ ಜೊನಾಥನ್‌ ಕ್ರಿಸ್ಟಿಗೆ ತಕ್ಕ ಪೈಪೋಟಿ ನೀಡಿದರಾದರೂ 18-21, 19-21 ಗೇಮ್‌ಗಳಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next