Advertisement

ಇಂಡೋನೇಶ್ಯ ಓಪನ್‌; ಸಿಂಧು, ಶ್ರೀಕಾಂತ್‌ಗೆ ಕಠಿನ ಗೆಲುವು

11:36 PM Nov 24, 2021 | Team Udayavani |

ಬಾಲಿ (ಇಂಡೋನೇಶ್ಯ): ಇಂಡೋನೇಶ್ಯ ಓಪನ್‌ ಸೂಪರ್‌-1000 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಕಠಿನ ಜಯದೊಂದಿಗೆ ಮೊದಲ ಸುತ್ತು ದಾಟಿದ್ದಾರೆ.

Advertisement

ವಿಶ್ವದ 7ನೇ ರ್‍ಯಾಂಕಿಂಗ್‌ ಆಟಗಾರ್ತಿ ಪಿ.ವಿ. ಸಿಂಧು 17-21, 21-17, 21-17 ಅಂತರದ ಹೋರಾಟದ ಬಳಿಕ ಜಪಾನಿನ ಅಯಾ ಒಹೊರಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಹೊರಿ ವಿರುದ್ಧ ಆಡಿದ ಎಲ್ಲ 11 ಪಂದ್ಯಗಳಲ್ಲೂ ಸಿಂಧು ಜಯ ಸಾಧಿಸಿದಂತಾಯಿತು.

ಕೆ. ಶ್ರೀಕಾಂತ್‌ ಭಾರತದವರೇ ಆದ ಎಚ್‌.ಎಸ್‌. ಪ್ರಣಯ್‌ ವಿರುದ್ಧ 21-15, 19-21, 21-12ರಿಂದ ಗೆದ್ದು ಬಂದರು. ಬಿ. ಸಾಯಿ ಪ್ರಣೀತ್‌ ಫ್ರಾನ್ಸ್‌ನ ಟೋಮ ಜೂನಿಯರ್‌ ಪೊಪೋವ್‌ ವಿರುದ್ಧ 21-19, 21-18 ಅಂತರದ ನೇರ ಗೇಮ್‌ ಗೆಲುವು ಕಂಡರು.

ಇದನ್ನೂ ಓದಿ:ಬೆಳೆನಷ್ಟಕ್ಕೆ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರಕ್ಕೆ ಡಿಕೆಶಿ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next