Advertisement

ಇಂದಿರಾ ಐವಿಎಫ್ ನೂತನ ಶಾಖೆ ಉದ್ಘಾಟನೆ

12:14 PM Aug 10, 2018 | |

ಬೆಂಗಳೂರು: ಬಂಜೆತನಕ್ಕೆ ಚಿಕಿತ್ಸೆ ನೀಡುವ ಖ್ಯಾತ ಇಂದಿರಾ ಐವಿಎಫ್‌ ಹಾಸ್ಪಿಟಲ್‌ ಪ್ರೈ. ಲಿ., ಸಮೂಹದ 48ನೇ ಶಾಖೆ ಹಾಗೂ ಬೆಂಗಳೂರು ನಗರದ 3ನೇ ಕೇಂದ್ರವನ್ನು ಇಂದಿರಾನಗರದ ಸಿಎಂಎಚ್‌ ರಸ್ತೆಯಲ್ಲಿ ಇತೀ¤ಚೆಗೆ ಉದ್ಘಾಟಿಸಲಾಯಿತು.

Advertisement

ಇಂದಿರಾ ಐವಿಎಫ್‌ ಸಮೂಹದ ಸ್ತ್ರೀರೋಗ ತಜ್ಞೆ ಮತ್ತು ಐವಿಎಫ್‌ ತಜ್ಞರಾಗಿರುವ ಡಾ. ರುತುಜಾ ಆರ್‌. ಅಥಾವಲೆ ಅವರು ಶಾಖೆ ಉದ್ಘಾಟಿಸಿದರು. ಈವೇಳೆ ಮಾತನಾಡಿದ ಅವರು, ಸಿಲಿಕಾನ್‌ ಸಿಟಿಯ ಮೂರನೇ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು, ಸಂಪೂರ್ಣ ರೀತಿಯಲ್ಲಿ ಬಂಜೆತನ ನಿವಾರಣೆಗೆ ಮೀಸಲಾಗಿರುವ ಕೇಂದ್ರವಾಗಿದೆ.

ಇದುವರೆಗೆ ಜಗತ್ತಿನಲ್ಲಿ ಐವಿಎಫ್‌ ತಂತ್ರದ ಮೂಲಕ 80 ಲಕ್ಷಕ್ಕೂ ಅಧಿಕ ಮಕ್ಕಳ ಜನನವಾಗಿದೆ. ಇತೀಚಿನ ದಿನಗಳಲ್ಲಿ ಈ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಯಶಸ್ಸಿನ ಪ್ರಮಾಣವೂ ಗಣನೀಯವಾಗಿ ವೃದ್ಧಿಸಿದೆ. ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ಐವಿಎಫ್‌ (ಪ್ರನಾಳ ಶಿಶು) ತಜ್ಞರಿಂದ ಚಿಕಿತ್ಸೆ ಪಡೆದಲ್ಲಿ ಗರ್ಭಧಾರಣೆ ಅವಕಾಶಗಗಳು ಹೆಚ್ಚಲಿವೆ ಎಂದು ಮಾಹಿತಿ ನೀಡಿದರು.

ಸಮೂಹದ ಅಧ್ಯಕ್ಷ ಡಾ.ಅಜಯ್‌ ಮುರ್ಡಿಯ ಮಾತನಾಡಿ, ಮಗುವಿಗಾಗಿ ಹಂಬಲಿಸುವ ಹಾಗೂ ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಅವರ ಕನಸು ನನಸಾಗಲಿದೆ. ಇಂದು ದೇಶದ ಪ್ರತಿ ಎಂಟು ದಂಪತಿಗಳಲ್ಲಿ ಒಂದು ಜೋಡಿ  ಬಂಜೆತನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next