Advertisement

ಆಗಸ್ಟ್‌ ಮಧ್ಯದವರೆಗೂ ರೈಲಿಲ್ಲ? ಆ. 14ರವರೆಗೆ ಬುಕ್‌ ಆದ ಟಿಕೆಟ್‌ ಮೊತ್ತ ಮರುಪಾವತಿಗೆ ಸೂಚನೆ

02:44 AM Jun 25, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಸಂಬಂಧಿತ ಲಾಕ್ ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಯಾನ ಮತ್ತೆ ಆರಂಭವಾಗಿದ್ದರೂ ರೈಲುಗಳ ಸಂಚಾರ ಸದ್ಯಕ್ಕಂತೂ ಪುನರಾರಂಭಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ.

Advertisement

ಆಗಸ್ಟ್‌ 14ರವರೆಗೆ ಕಾದಿರಿಸಲಾಗಿರುವ ಎಲ್ಲ ಟಿಕೆಟ್‌ಗಳ ಮೊತ್ತವನ್ನೂ ಮರು ಪಾವತಿ ಮಾಡುವಂತೆ ತನ್ನ ಎಲ್ಲ ವಲಯಗಳಿಗೂ ರೈಲ್ವೇ ಇಲಾಖೆ ಸುತ್ತೋಲೆ ಕಳುಹಿಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.

120 ದಿನಗಳ ಮುಂಚಿತವಾಗಿ ಟಿಕೆಟ್‌ ಕಾದಿರಿಸಲು ಇತ್ತೀಚೆಗಷ್ಟೇ ರೈಲ್ವೇ ಇಲಾಖೆ ಅನುಮತಿ ನೀಡಿತ್ತು. ಆದರೆ ಸೋಮವಾರ ಎಲ್ಲ ವಲಯಗಳಿಗೂ ಟಿಕೆಟ್‌ಗಳ ಸಂಪೂರ್ಣ ಮೊತ್ತ ಮರುಪಾವತಿ ಮಾಡುವಂತೆ ಸೂಚಿಸಿದೆ.

ಜತೆಗೆ ಇಲಾಖೆಯು ರೈಲನ್ನು ರದ್ದು ಮಾಡಿದ ಕೂಡಲೇ ಪ್ರಯಾಣಿಕರು ತಮ್ಮ ಟಿಕೆಟನ್ನು ರದ್ದುಗೊಳಿಸುವ ಅಗತ್ಯವಿಲ್ಲ. ರೈಲು ಸಂಚಾರ ರದ್ದಾದೊಡನೆ ತನ್ನಿಂತಾನೇ ಟಿಕೆಟ್‌ ಮೊತ್ತ ಮರುಪಾವತಿಯಾಗುತ್ತದೆ ಎಂದು ಪ್ರಯಾಣಿಕರಿಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next