Advertisement

ಮೂರೂ ಸೇನಾಪಡೆಗಳು ಒಗ್ಗೂಡಬೇಕು: ಅಡ್ಮಿರಲ್‌ ಕರಂಬೀರ್‌ ಸಿಂಗ್‌

09:06 PM May 29, 2021 | Team Udayavani |

ಪುಣೆ: ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ರೂಪುರೇಷೆಗಳು ಬದಲಾಗಿವೆ. ಹಾಗಾಗಿ ಭಾರತದ ನೌಕಾದಳ, ವಾಯುಪಡೆ, ಭೂಸೇನೆ ಜಂಟಿ ಕಾರ್ಯಾಚರಣೆ ನಡೆಸಬೇಕಾದ ಅಗತ್ಯವಿದೆ ಎಂದು ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಹೇಳಿದ್ದಾರೆ.

Advertisement

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) 140 ಕೋರ್ಸ್‌ನ ಪದವಿಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಯುದ್ಧದ ರೀತಿ ಬದಲಾಗಿದೆ. ಎಲ್ಲ ರೀತಿಯಲ್ಲೂ ನಾವು ಯೋಚಿಸಬೇಕು. ಭೂಮಿ, ಸಮುದ್ರ, ಆಕಾಶ, ಅಂತರಿಕ್ಷ, ಸೈಬರ್‌ ಹೀಗೆ… ಹಲವು ರೀತಿಯಲ್ಲಿ ಯೋಜಿತ ದಾಳಿಗಳು ನಡೆಯುತ್ತಿವೆ. ಅದಕ್ಕಾಗಿ ಒಗ್ಗೂಡಬೇಕಾದ ಅಗತ್ಯವಿದೆ.

ಮಿಲಿಟರಿ ವಿದ್ಯಮಾನಗಳ ಇಲಾಖೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಸಂಸ್ಥೆಗಳು ರಚನೆಯಾಗಿರುವುದೇ ಈ ಕಾರಣಕ್ಕೆ ಎಂದು ಕರಂಬೀರ್‌ ತಿಳಿಸಿದ್ದಾರೆ.

ಇದನ್ನೂ ಓದಿ :ಕೆಟ್ಟಿರುವ ವೆಂಟಿಲೇಟರ್ ಗಳ ರಿಪೇರಿಗೆ ಮುಂದಾದ ಬಾಷ್ ಕಂಪನಿ : ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next