Advertisement

ಉಗ್ರರನ್ನು ನುಗ್ಗಿಸಲಾಗದ ಹತಾಶೆ: ಪಾಕಿಗೆ ಭಾರತದ ತಕ್ಕ ಉತ್ತರ

10:49 AM Jan 12, 2019 | udayavani editorial |

ಜಮ್ಮು : ತನ್ನ ನುಸುಳುಕೋರರನ್ನು ಭಾರತದ ಗಡಿಯೊಳಗೆ ನುಗ್ಗಿಸಲಾಗದೆ ಹತಾಶಗೆ ಒಳಗಾಗಿರುವ ಪಾಕಿಸ್ಥಾನಕ್ಕೆ ಭಾರತೀಯ ಸೇನಾ ಪಡೆ ಅತ್ಯಂತ ಪರಿಣಾಮಕಾರಿ ಮತ್ತು ತಕ್ಕುದಾದ ಉತ್ತರವನ್ನು ನೀಡುತ್ತಿದೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಇಂದು ಶನಿವಾರ ಹೇಳಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿ ಪಂಚಾಯತ್‌ ಚುನಾವಣೆಗಳು ಯಶಸ್ವಿಯಾಗಿ ನಡೆದಿವೆ. ಇವನ್ನು ನಿರಸನಗೊಳಿಸುವ ಪಾಕ್‌ ಉಗ್ರರ ಯತ್ನಗಳು ವಿಫ‌ಲಗೊಂಡಿವೆ. ಕಾಶ್ಮೀರ ಕಣಿವೆಯಲ್ಲೀಗ ಸಂಪೂರ್ಣ ಶಾಂತಿ ನೆಲೆಸಿದೆ ಎಂದು ಸತ್ಯಪಾಲ್‌ ಮಲಿಕ್‌ ಹೇಳಿದರು.

ರಾಜೋರಿ ಜಿಲ್ಲೆಯಲ್ಲಿನ ಎಲ್‌ಓಸಿಯಲ್ಲಿ ಉಗ್ರರು ನಡೆಸಿರುವ ಐಇಡಿ ಸ್ಫೋಟಕ್ಕೆ ಬಲಿಯಾದ ಸೇನಾ ಮೇಜರ್‌ ಮತ್ತು ಓರ್ವ ಯೋಧನಿಗೆ ಹುತಾತ್ಮ ಪದ ನೀಡುವ ಸಮಾರಂಭದಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಈ ಬಗೆಯ ಕೃತ್ಯಗಳು ಪಾಕ್‌ ಹತಾಶೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next