Advertisement

ನಾಥೂಲಾದಲ್ಲಿ ಭಾರೀ ಹಿಮಪಾತ; ಸೈನಿಕರಿಂದ 2,500 ಪ್ರವಾಸಿಗರ ರಕ್ಷಣೆ

05:03 AM Dec 29, 2018 | Team Udayavani |

ನವದೆಹಲಿ:ಭಾರೀ ಹಿಮಪಾತದಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದು, ಭಾರತೀಯ ಸೇನಾಪಡೆ ಸುಮಾರು 2,500ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಸಿಕ್ಕಿಂನ ಗ್ಯಾಂಗ್ಟಕ್ ಸಮೀಪದ ನಾಥೂಲಾದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ವಾಹನಗಳು ಸಿಲುಕಿಕೊಂಡಿದ್ದವು.

Advertisement

ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಬಳಿಕ ಅವರನ್ನು ಶುಕ್ರವಾರ ರಾತ್ರಿ ಊಟೋಪಚಾರ, ಔಷಧೋಪಚಾರ ಹಾಗೂ ತಾತ್ಕಾಲಿಕ ಶಿಬಿರದ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ವರದಿ ವಿವರಿಸಿದೆ. ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆರ್ಮಿ, ಭಾರೀ ಹಿಮಪಾತದಲ್ಲಿ ಸಿಲುಕಿದ್ದ 400 ವಾಹನಗಳಲ್ಲಿದ್ದ 2,500ಕ್ಕೂ ಹೆಚ್ಚು ಜನರನ್ನು ನಾಥೂಲಾದಲ್ಲಿ ರಕ್ಷಿಸಲಾಗಿದೆ ಎಂದು ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next