Advertisement

ಉಗ್ರ ಹಣಕಾಸು ನಿಗ್ರಹ ಠರಾವು: ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ

09:57 AM Mar 30, 2019 | Team Udayavani |

ಹೊಸದಿಲ್ಲಿ : ಭಯೋತ್ಪಾದಕರಿಗೆ ಹಣ ಪೂರೈಕೆಯಾಗುವುದನ್ನು ತಡೆಯುವ ‘ಉಗ್ರ ಹಣಕಾಸು ನಿಗ್ರಹ’ ಠರಾವನ್ನು ಎಲ್ಲ ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕೆಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ಕರೆಯನ್ನು ಭಾರತ ಸ್ವಾಗತಿಸಿದೆ.

Advertisement

“ಭಯೋತ್ಪಾದಕರಿಗೆ ಹಣ ಒದಗದಂತೆ ಮಾಡಲು ಉಗ್ರ ಹಣಕಾಸು ನಿಗ್ರಹ ಠರಾವನ್ನು ಎಲ್ಲ ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕೆಂಬ ವಿಶ್ವಸಂಸ್ಥೆಯ ಕರೆಯನ್ನು ನಾವು ಸ್ವಾಗತಿಸುತ್ತೇವೆ; ಉಗ್ರ ಹಣಕಾಸು ನಿಗ್ರಹ ಕಾರ್ಯ ಪಡೆ ಅತ್ಯಂತ ಮುಖ್ಯ ಪಾತ್ರ ವಹಿಸುವಲ್ಲಿ ಈ ಠರಾವು ನಿರ್ಣಾಯಕವಾಗಲಿದೆ. ವಿಶ್ವಸಂಸ್ಥೆಯ ನಿರ್ಣಯದ ಯಶಸ್ಸಿಗೆ ಅದರ ಅನುಷ್ಠಾನ ಅತೀ ಮುಖ್ಯವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್‌ ಅಕ್‌ಬರುದ್ದೀನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next