Advertisement

ಚಾಂಪ್ಯನ್ಸ್‌ ಟ್ರೋಫಿ: ಭಾರತದೆದುರು ಟಾಸ್‌ ಗೆದ್ದ ಲಂಕಾ ಬೌಲಿಂಗ್‌

03:24 PM Jun 08, 2017 | udayavani editorial |

ಲಂಡನ್‌ :  ಇಲ್ಲಿನ ಓವಲ್‌ ಕ್ರೀಡಾಂಗಣದಲ್ಲಿಂದು ಚಾಂಪ್ಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತವನ್ನು ಎದುರಿಸುವ ಶ್ರೀಲಂಕಾ ಟಾಸ್‌ ಗೆದ್ದು ಬೌಲಿಂಗ್‌ ಆಯ್ದು ಕೊಂಡಿದೆ.

Advertisement

ಮೋಡ ಕವಿದ ಮಬ್ಬು ವಾತಾವರಣದ ಪೂರ್ಣ ಪ್ರಯೋಜನವನ್ನು  ತನ್ನ  ತಂಡ ಫ‌ಲಪ್ರದವಾಗಿ ಪಡೆಯಲಿದೆ ಎಂದು ಲಂಕೆಯ ಕಪ್ತಾನ ಏಂಜಲೋ ಮ್ಯಾಥ್ಯೂಸ್‌ ಹೇಳಿದ್ದಾರೆ. 

ಹಾಲಿ ಕೂಟದ ತನ್ನ ಮೊದಲ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 124 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಬಲವಾದ ಆತ್ಮವಿಶ್ವಾಸ ಪಡೆದುಕೊಂಡಿದೆ. ಲಂಕೆಯ ಎದುರಿನ ಇಂದಿನ ಪಂದ್ಯವನ್ನು ಜಯಿಸಿದಲ್ಲಿ  ಭಾರತ ಸೆಮಿ ಫೈನಲ್‌ ಪ್ರವೇಶಿಸುತ್ತದೆ.

ಭಾರತ ತಂಡ : ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಎಂ ಎಸ್‌ ಧೋನಿ, ಜಾಧವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಭುಮ್ರಾ,

ಶ್ರೀಲಂಕಾ ತಂಡ: ಎನ್‌ ಡಿಕ್‌ವೆಲಾ, ಡಿ.ಗುಣತಿಲಕ, ಕೆ ಮೆಂಡಿಸ್‌, ಡಿ. ಚಂಡಿಮಾಲ್‌, ಎ ಮ್ಯಾಥ್ಯೂಸ್‌, ಕೆ ಪಿರೇರಾ, ಎ ಗುಣರತ್ತೆ, ಟಿ ಪಿರೇರಾ, ಎಸ್‌ ಲಕಮಾಲ್‌, ಎಲ್‌ ಮಾಲಿಂಗ್‌, ಎನ್‌ ಪ್ರದೀಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next