Advertisement

ಅನಾರೋಗ್ಯ: ಮೈದಾನಕ್ಕಿಳಿಯದ ಅಂಪಾಯರ್‌ ಕೆಟಲ್‌ಬರೋ

06:30 AM Nov 19, 2017 | |

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾ ಟೆಸ್ಟ್‌ ಪಂದ್ಯದ ಅಂಪಾಯರ್‌ ರಿಚರ್ಡ್‌ ಕೆಟಲ್‌ಬರೋ 3ನೇ ದಿನದಾಟದಲ್ಲಿ ಅಂಗಳಕ್ಕಿಳಿಯಲಿಲ್ಲ. ನೆಗಡಿ ಹಾಗೂ ಗಂಟಲು ಕೆರೆತದಿಂದ ಅವರು ವಿಶ್ರಾಂತಿ ಪಡೆಯಲು ನಿರ್ಧರಿಸಿದರು.

Advertisement

ಕೆಟಲ್‌ಬರೋ ಅನುಪಸ್ಥಿತಿಯಲ್ಲಿ ವೆಸ್ಟ್‌ ಇಂಡೀಸಿನ ಜೋಯೆಲ್‌ ವಿಲ್ಸನ್‌ ಮೈದಾನದ ಅಂಪಾಯರ್‌ ಆಗಿ ಕರ್ತವ್ಯ ನಿಭಾಯಿಸಿದರು. ನೈಜೆಲ್‌ ಲಾಂಗ್‌ ಈ ಪಂದ್ಯದ ಮತ್ತೋರ್ವ ಫೀಲ್ಡ್‌ ಅಂಪಾಯರ್‌.

“ರಿಚರ್ಡ್‌ ಕೆಟಲ್‌ಬರೋ ಅವರ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರಿಂದು ಕರ್ತವ್ಯ ನಿಭಾಯಿಸುವುದಿಲ್ಲ. ಅವರ ಬದಲು ಥರ್ಡ್‌ ಅಂಪಾಯರ್‌ ಜೋಯೆಲ್‌ ವಿಲ್ಸನ್‌ ಫೀಲ್ಡ್‌ ಅಂಪಾಯರ್‌ ಆಗಿ ಕಣಕ್ಕಿಳಿಯಲಿದ್ದಾರೆ’ ಎಂದು ಶನಿವಾರದ ಪಂದ್ಯದಾರಂಭಕ್ಕೂ ಮುನ್ನ ಬಂಗಾಲ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next