Advertisement

ಒದ್ದೆ ಮೈದಾನ: ಟಿ20 ಪಂದ್ಯ ರದ್ದು 

11:12 PM Dec 29, 2022 | Team Udayavani |

ಪ್ರಿಟೋರಿಯ: ಮಳೆ ಮತ್ತು ಮೈದಾನ ಒದ್ದೆಯಾಗಿದ್ದರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ವನಿತಾ ಅಂಡರ್‌-19 ಟಿ20 ಪಂದ್ಯವು ರದ್ದುಗೊಂಡಿದೆ.

Advertisement

ಆರಂಭದಲ್ಲಿ ಮಳೆಯಿಂದಾಗಿ ಟಾಸ್‌ ಮತ್ತು ಆಟದ ಆರಂಭವನ್ನು ವಿಳಂಬ ಮಾಡಲಾಗಿತ್ತು. ಆದರೆ ಪಿಚ್‌ ಮತ್ತು ಮೈದಾನ ಪರಿಶೀಲಿಸಿದ ಬಳಿಕ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪಾಯರ್‌ಗಳು ತೀರ್ಮಾನಿಸಿದರು.

ಭಾರತ ಅಂಡರ್‌-19 ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಸರಣಿಯ ಮೂರನೇ ಪಂದ್ಯ ಡಿ. 31ರಂದು ನಡೆಯಲಿದೆ. ಐಸಿಸಿ ವನಿತಾ ಟಿ20 ವಿಶ್ವಕಪ್‌ ಕೂಟವು ದಕ್ಷಿಣ ಆಫ್ರಿಕಾದಲ್ಲಿ ಜನವರಿ 14ರಿಂದ ಆರಂಭವಾಗುವ ಕಾರಣ ಈ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next