ಧರ್ಮಶಾಲಾ: ಇಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ಪ್ರವಾಸಿ ದಕ್ಷಿಣ ಅಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಟಾಸ್ ನಡೆಯುವುದಕ್ಕೂ ಅರ್ಧ ಗಂಟೆ ಮೊದಲು ವಾತಾವರಣ ಶುಭ್ರವಾಗಿತ್ತು. ಆದರೆ ಆ ಬಳಿಕ ಸುರಿಯಲಾರಂಭಿಸಿದ ಮಳೆ ನಿಲ್ಲಲೇ ಇಲ್ಲ.
ಮಳೆ ನಿಂತ ಬಳಿಕ ಮೈದಾನ ಒಣಗಿಸುವ ಪ್ರಯತ್ನವೂ ಫಲ ನೀಡಲಿಲ್ಲ. ಇದು ಈ ಮೈದಾನದಲ್ಲಿ ಒಂದೂ ಎಸೆತ ಕಾಣದೆ ರದ್ದಾಗುತ್ತಿರುವ ಎರಡನೇ ಪಂದ್ಯವಾಗಿದೆ. ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದನ ಪಂದ್ಯವೇ ಆಗಿದ್ದಿದು ವಿಶೇಷವಾಗಿದೆ.
ಇದೀಗ ಈ ಪಂದ್ಯ ರದ್ದಾಗಿರುವುದರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿ ಎರಡು ಪಂದ್ಯಗಳಿಗೆ ಸೀಮಿತಗೊಂಡಂತಾಗಿದೆ. ಮುಂದಿನ ಪಂದ್ಯ ಮಾರ್ಚ್ 15ರಂದು ಲಕ್ನೋದಲ್ಲಿ ನಡೆಯಲಿದೆ ಹಾಗೂ ಅಂತಿಮ ಪಂದ್ಯ ಮಾರ್ಚ್ 18ರಂದು ಕೊಲ್ಕೊತ್ತಾದಲ್ಲಿ ನಡೆಯಲಿದೆ.