Advertisement

ವಿವೇಕಾನಂದ ತತ್ವದಿಂದ ಭಾರತ ಸಮೃದ್ಧ

01:18 PM Jan 15, 2022 | Team Udayavani |

ಬೀದರ: ಸ್ವಾಮಿ ವಿವೇಕಾನಂದರ ತತ್ವಗಳ ಪಾಲನೆಯಿಂದ ಸಮೃದ್ಧ ಭಾರತ ಕಟ್ಟಲು ಸಾಧ್ಯವಿದೆ ಎಂದು ಜ್ಞಾನ ಸಂಗಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೀಪಕ ಮನ್ನಳ್ಳಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವಕರು ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿದ್ದರು ಎಂದು ತಿಳಿಸಿದರು.

ಮನ್ನಳ್ಳಿಯ ಜ್ಞಾನ ಜ್ಯೋತಿ ಭವನದ ಸಂಚಾಲಕಿ ಮೀನಾ ಬಹೆನ್‌ಜಿ ಮಾತನಾಡಿ, ವಿವೇಕಾನಂದರ ಬದುಕು ಯುವಕರಿಗೆ ದಾರಿ ದೀಪವಾಗಿದೆ ಎಂದರು. ಬೀದರ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಗುರುದೇವಿ ಬಹೆನ್‌ಜಿ ಮಾತನಾಡಿದರು.

ಪ್ರಾಚಾರ್ಯ ಪ್ರೊ| ವಿನಾಯಕ ಕೊತಮಿರ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ ಎಸ್‌ ಅ ಧಿಕಾರಿ ಡಾ| ಹೇಮಾವತಿ ಪಾಟೀಲ, ಸೈಯದ್‌ ಮಕದುಮ್‌ ಅಹಮ್ಮದ್‌, ಸತ್ಯಶೀಲ, ಅಯೂಬ್‌ ಅಹಮ್ಮದ್‌, ಮಹಮ್ಮದ್‌ ಮುಸ್ತಫಾ ಇದ್ದರು. ಡಾ| ಸಂಜೀವಕುಮಾರ ತಾಂದಳೆ ಸ್ವಾಗತಿಸಿದರು. ಪ್ರೊ| ಮಹೇಶಕುಮಾರ ಆರ್‌. ನಿರೂಪಿಸಿದರು. ಊರ್ವಶಿ ಕೋಡ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next