Advertisement

ಅಬ್ಬಟಬಾದ್‌ ನೆನಪಿಸಿಕೊಳ್ಳಿ: ಭಾರತ

02:17 AM Nov 26, 2020 | mahesh |

ಹೊಸದಿಲ್ಲಿ: “ನಿಮಗೆ ಅಬ್ಬಟಬಾದ್‌ ನೆನಪಿದೆಯೇ?’ ಇಂಥದ್ದೊಂದು ಪ್ರಶ್ನೆಯನ್ನು ಕೇಳಿರುವುದು ವಿಶ್ವಸಂಸ್ಥೆಯಲ್ಲಿನ ಭಾರತೀಯ ಶಾಶ್ವತ ರಾಯಭಾರಿ ಟಿ.ಎಸ್‌. ತಿರುಮೂರ್ತಿ.

Advertisement

ಭಾರತವು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ಥಾನದ ರಾಯಭಾರಿ ಮುನೀರ್‌ ಅಕ್ರಮ್‌ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆ ರಸ್‌ಗೆ ನೀಡಿರುವ ಸುಳ್ಳೇ ಸುಳ್ಳು ಟಿಪ್ಪಣಿಗೆ ಪ್ರತಿಯಾಗಿ ತಿರುಮೂರ್ತಿ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

“ವಿಶ್ವದ ನಂ.1 ಉಗ್ರ, ಅಲ್‌ಖೈದಾದ ಒಸಾಮ ಬಿನ್‌ ಲಾಡೆನ್‌ ಹಲವು ವರ್ಷಗಳ ಕಾಲ ಅವಿತು ಕುಳಿತಿದ್ದೇ ಪಾಕಿಸ್ಥಾನದ ಅಬೋಟ್ಟಾಬಾದ್‌ನಲ್ಲಿ. ಆತನನ್ನು ಅಮೆ ರಿಕದ ಸೀಲ್‌ ಪಡೆ ಕಾರ್ಯಾಚರಣೆ ನಡೆಸಿ ಕೊಂದಿದ್ದೂ ಇದೇ ಅಬೋ ಟ್ಟಾಬಾದ್‌ನಲ್ಲಿ. ವಿಶ್ವಸಂಸ್ಥೆ ಘೋಷಿಸಿರುವ ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳ ಪೈಕಿ ಅತಿ ಹೆಚ್ಚಿನವರಿಗೆ ಇದೇ ದೇಶ ಆಶ್ರಯ ನೀಡಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ತಿರುಮೂರ್ತಿ ಅವರು ಟ್ವಿಟರ್‌ನಲ್ಲೇ ಪಾಕ್‌ ರಾಯಭಾರಿಗೆ ಪ್ರತ್ಯುತ್ತರ ನೀಡಿ ದ್ದಾರೆ.ಜತೆಗೆ, ದಾಖಲೆಗಳನ್ನು ತಿರುಚು ವುದು ಮತ್ತು ಸುಳ್ಳು ಆರೋಪಗಳನ್ನು ಹೊರಿಸುವುದು ಪಾಕಿಸ್ಥಾನಕ್ಕೆ ಹೊಸತೇನಲ್ಲ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next