Advertisement

ಮಂಜು ಕವಿದ ವಾತಾವರಣ: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ!

09:11 AM Apr 03, 2021 | Team Udayavani |

ಹುಬ್ಬಳ್ಳಿ: ನಗರದಲ್ಲಿ ದಟ್ಟ ಮಂಜು-ಮೋಡಕವಿದ ವಾತಾವರಣವಿದ್ದ ಕಾರಣ ಬೆಂಗಳೂರಿನಿಂದ ನಗರಕ್ಕೆ ಶನಿವಾರ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ಪ್ರಯಾಣ ಬೆಳೆಸಿತು.

Advertisement

ಬೆಳಗ್ಗೆ ಸರಿಯಾಗಿ 7:20 ಗಂಟೆಗೆ ಆಗಮಿಸಿದ್ದ ವಿಮಾನ ದಟ್ಟ ಮಂಜು ಆವರಿಸಿದ್ದರಿಂದ ಲ್ಯಾಂಡಿಂಗ್ ಆಗಲು ಆಗದೆ ಆಗಸದಲ್ಲಿಯೇ ಸುಮಾರು 20 ನಿಮಿಷ ಸುತ್ತಾಡಿತು. ಎಟಿಎಸ್ ನಿಂದ ಸಿಗ್ನಲ್ ಸಿಗದ ಕಾರಣ ಕೊನೆಗೆ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿತು. ವಿಮಾನದಲ್ಲಿ ಸುಮಾರು 65 ಪ್ರಯಾಣಿಕರು ಇದ್ದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅಂದಾಜು 62 ಪ್ರಯಾಣಿಕರು ತೆರಳುವವರಿದ್ದರು.

ಇದೇ ಸಮಯದಲ್ಲಿ ಚೆನ್ನೈನಿಂದ ನಗರಕ್ಕೆ ಬೆಳಗ್ಗೆ 8:00 ಗಂಟೆಗೆ ಆಗಮಿಸಿದ್ದ ಇಂಡಿಗೋ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿ, ಮರಳಿ ಕೊಚ್ಚಿಗೆ ಪ್ರಯಾಣ ಬೆಳೆಸಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next